ಕನ್ಯಾಡಿ: ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಅಂಕ ಪಡೆದ ಯಕ್ಷಿತಾರಿಗೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಸನ್ಮಾನ

Suddi Udaya

Updated on:

ಕನ್ಯಾಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕನ್ಯಾಡಿ -1 ಇದರ ವತಿಯಿಂದ ಲಾಯಿಲ ಸೈಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿ ಎಸ್.ಎಸ್.ಎಲ್.ಸಿ ಯಲ್ಲಿ 614 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ಕನ್ಯಾಡಿ -1 ಗ್ರಾಮದ ಕಡ್ತಿಮಾರು ಜನಾರ್ದನ ಗೌಡ ಲತಾ ದಂಪತಿಯ ಪುತ್ರಿ ಯಕ್ಷಿತಾರನ್ನು ಸಮಿತಿಯ ವತಿಯಿಂದ ಅವರ ಮನೆಯಲ್ಲಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಾಣಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರಸಾದ್ ಕಡ್ತಿಮಾರು, ಸಮಿತಿಯ ಪದಾಧಿಕಾರಿಗಳಾದ ತನಿಯಪ್ಪ ಗೌಡ, ಪ್ರವೀಣ್ ವಿ.ಜಿ, ಬಾಲಕೃಷ್ಣ ಗೌಡ, ಜಯ ಗೌಡ ಒಳಗುಡ್ಡೆ, ಕಿಶೋರ್ ಕೆಲ್ತಾಜೆ, ರೋಹಿತ್, ಪ್ರದೀಪ್, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

Leave a Comment

error: Content is protected !!