ಡಾ| ವೈ.ಉಮಾನಾಥ ಶೆಣೈಯವರಿಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ

Suddi Udaya

ಉಜಿರೆ: ಸಾಹಿತ್ಯ ಮತ್ತು ಸಂಶೋಧನೆಯಲ್ಲಿ ವಿಶೇಷ  ಸಾಧನೆ ಮಾಡಿರುವ ಉಜಿರೆ ಶ್ರೀ ಧ .ಮಂ .ಕಾಲೇಜಿನ ಇತಿಹಾಸ ವಿಭಾಗದ ನಿವೃತ್ತ ಉಪನ್ಯಾಸಕ ,  ಇತಿಹಾಸ ತಜ್ಞ  ಡಾ.ವೈ.ಉಮಾನಾಥ ಶೆಣೈ ಎಂ.ಎ.,ಪಿಎಚ್.ಡಿ., ಅವರಿಗೆ  ಮೇ  25 ರಂದು  ಬೆಂಗಳೂರಿನ  ರವೀಂದ್ರ ಕಲಾಕ್ಷೇತ್ರದಲ್ಲಿ  ನಡೆದ ಸಮಾರಂಭದಲ್ಲಿ ಅಂತರ್ ರಾಷ್ಟ್ರೀಯ  ಆರ್ಯಭಟ  ಪ್ರಶಸ್ತಿ ನೀಡಿ  ಗೌರವಿಸಲಾಯಿತು. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ  ನ್ಯಾಯಮೂರ್ತಿ ಪಿ.ಎಸ್.ದಿನೇಶ ಕುಮಾರ್ ,ರಾಜ್ಯ  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ  ಜೋಶಿ, ಚಲನಚಿತ್ರ ನಿರ್ದೇಶಕ  ಟಿ.ಎಸ್. ನಾಗಾಭರಣ  ಮತ್ತು ಆರ್ಯಭಟ ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಎಲ್.ಎನ್.ರಾವ್ ಮೊದಲಾದವರು ಪ್ರಶಸ್ತಿ ಪ್ರದಾನಗೈದರು .                                                                ಡಾ.ವೈ. ಉಮಾನಾಥ ಶೆಣೈಯವರು  ಈಗಾಗಲೇ  ತಮ್ಮ ಸಂಶೋಧನೆ ಹಾಗೂ ಸಾಹಿತ್ಯಿಕ ಸೇವೆಗಾಗಿ  ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಾಕೃತ ಸಾಹಿತ್ಯ ಪ್ರಶಸ್ತಿ, ವಿಶ್ವಕೊಂಕಣಿ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ , ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಸಿದ್ಧಗಂಗಾ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳಿಂದ ಸನ್ಮಾನಿತರಾಗಿದ್ದಾರೆ. ಸಾಹಿತಿಯಾಗಿ  ಅವರು 28 ಕೃತಿಗಳನ್ನು ರಚಿಸಿ  ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದಾರೆ.

Leave a Comment

error: Content is protected !!