23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಭಾರತೀಯ ಜನತಾ ಪಾರ್ಟಿ ಶಕ್ತಿ ಕೇಂದ್ರ ಬೆಳಾಲು ಕಾರ್ಯಕರ್ತರಿಗೆ ಹಾಗೂ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ

ಬೆಳಾಲು: ಮೇ 31 ರಂದು ಬೆಳಾಲು ಗ್ರಾಮದ ಮೈತ್ರಿ ಯುವಕ ಮಂಡಲದ ವಠಾರದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳಾಲು ಶಕ್ತಿಕೇಂದ್ರ ಕಾರ್ಯಕರ್ತರಿಗೆ ಹಾಗೂ ಎರಡನೇ ಭಾರಿಗೆ ಅಭೂತಪೂರ್ವ ‌ಗೆಲುವಿನ ನಗೆ ಬೀರಿದ ಶಾಸಕರಾದ ಹರೀಶ್ ಪೂಂಜರವರಿಗೆ ಅಭಿನಂದನಾ ಕಾರ್ಯಕ್ರಮ ಚೆಂಡೆ ವಾದನ ಜೊತೆಗೆ ವಿಜೃಂಭಣೆಯಿಂದ ನೆರವೇರಿತು.

ಭಾರತ ಮಾತೆಗೆ ಪುಷ್ಪಾರ್ಚನೆಗೈಯುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಶಾಸಕರಾದ ಹರೀಶ್ ಪೂಂಜ ಕಾರ್ಯಕರ್ತ ಬಂಧುಗಳಿಗೆ ಕೃತಜ್ಞತಾ ಪೂರ್ವಕ ಅಭಿನಂದನೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಉಪಾಧ್ಯಕ್ಷರು ಬೆಳ್ತಂಗಡಿ ಮಂಡಲದ ಪ್ರಭಾರಿಗಳು ಭಾಗವಹಿಸಿ ಅತ್ಯಧಿಕ ಬಹುಮತಗಳಿಂದ ಗೆಲುವನ್ನು ಸಾಧಿಸಿದ ಶಾಸಕರಿಗೆ ಹಾಗೂ ಶ್ರಮಿಸಿದ ಕಾರ್ಯಕರ್ತ ಬಂಧುಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.


ಶಾಸಕರಿಗೆ ಹಾಗೂ ಹಿರಿಯ ಕಾರ್ಯಕರ್ತ ಬಂಧುಗಳಿಗೆ ಗೌರವದ ಸನ್ಮಾನ ಕಾರ್ಯಕ್ರಮ ನೆರವೇರಿತು.
ವೇದಿಕೆಯಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಮಂಡಲ ಉಪಾಧ್ಯಕ್ಷರಾದ ಸೀತಾರಾಮ್ ಬಿ ಎಸ್ ಹಾಗೂ ಕೊರಗಪ್ಪ ಗೌಡ ಚಾರ್ಮಾಡಿ, ಧರ್ಮಸ್ಥಳ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಯೋಗೀಶ್ ಆಲಂಬಿಲ ,ಬೆಳಾಲು ಗ್ರಾಮದ ಚುನಾವಣಾ ಪ್ರಭಾರಿ ಹಾಗೂ ಸಹಕಾರ ಭಾರತಿ ಇದರ ಅಧ್ಯಕ್ಷರಾದ ರಾಜೇಶ್ ಪೆರ್ಮುಡ, ಮಂಡಲ ಯುವ ಮೋರ್ಚಾದ ಅಧ್ಯಕ್ಷರಾದ ಯಶವಂತ್ ಗೌಡ ಬಿ.ಟಿ ಬನಂದೂರು , ಬೆಳಾಲು ಶಕ್ತಿ ಕೇಂದ್ರದ ಅಧ್ಯಕ್ಷರು ಸುರೇಂದ್ರ ಗೌಡ ಸುರುಳಿ, ಬೆಳಾಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಎಳ್ಳುಗದ್ದೆ, ಬೂತ್ ಸಮಿತಿಯ ಅಧ್ಯಕ್ಷರುಗಳಾದ ಗಂಗಾಧರ ಸಾಲಿಯನ್, ವಸಂತ ಕಿನ್ಯಾಜೆ, ದಾಮೋದರ ಕಾಡಂಡ, ದಿನೇಶ್ ಧರ್ಮದೋಡಿ ಉಪಸ್ಥಿತರಿದ್ದರು ಅಭಿನಂದನಾ ಸಮಾರಂಭ ಅರ್ಥಪೂರ್ಣವಾಗಲು ನಾಲ್ಕು ಬೂತಿನ ನಾಲ್ಕು ವ್ಯಕ್ತಿ ಗಳಿಗೆ ಸಹಾಯಧನ ನೀಡಲಾಯಿತು. ಈ ಸಂಧರ್ಭದಲ್ಲಿ ಬೂತ್ ಸಮಿತಿ ಕಾರ್ಯದರ್ಶಿಗಳು ಜನಪ್ರತಿನಿಧಿಗಳು, ಹಿರಿಯ ಕಾರ್ಯಕರ್ತ ಬಂಧುಗಳು ಎಲ್ಲಾ ಬೆಳಾಲು ಗ್ರಾಮದ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

ವಕೀಲರಾದ ಶ್ರೀನಿವಾಸ್ ಗೌಡ ಪ್ರಾಸ್ತಾವಿಕ ದೊಂದಿಗೆ ಸ್ವಾಗತಿಸಿದರು ಹರಿಪ್ರಸಾದ್ ಅರಣೆಮಾರು ಧನ್ಯವಾದವಿತ್ತರು.ಶಶಿಧರ ಆಚಾರ್ಯ ಒಂದೇ ಮಾತರಂ ಗೀತೆ ಹಾಡಿದರು. ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಬೆಳ್ತಂಗಡಿ: ಅಪಘಾತ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಉಜಿರೆ ಭಾಸ್ಕರ್ ನಾಯ್ಕರ ಮೇಲೆ ಹಲ್ಲೆ ನಡೆಸಿದ ಆರೋಪ: ಮಹೇಶ್‌ ಶೆಟ್ಟಿ ತಿಮರೋಡಿ ಮತ್ತಿತರರ ಮೇಲೆ ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿದ ಕೋರ್ಟು 15 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಸೂಚನೆ

Suddi Udaya

ಅರಸಿನಮಕ್ಕಿ: ದರ್ಬೆತಡ್ಕ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನದಲ್ಲಿ ಚಿತ್ಪಾವನಿ ಭಾಷೆಯಲ್ಲಿ ಯಕ್ಷಗಾನ ತಾಳಮದ್ದಳೆ

Suddi Udaya

ಧರ್ಮಸ್ಥಳ: ದೊಂಡೋಲೆ ನಿವಾಸಿ ನಾಗೇಶ್ ಹೃದಯಾಘಾತದಿಂದ ನಿಧನ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ನಟ ದೇವರಾಜ್ ಕುಟುಂಬ ಸಮೇತ ಭೇಟಿ

Suddi Udaya

ಸುಲ್ಕೇರಿಯಲ್ಲಿ ಟಾಟಾ ಗೂಡ್ಸ್ ವಾಹನಕ್ಕೆ ಈಚರ್ ಲಾರಿ ಡಿಕ್ಕಿ

Suddi Udaya
error: Content is protected !!