ನಿಡ್ಲೆ ಹಾಗೂ ಪಟ್ರಮೆಯಲ್ಲಿ ಕಾಡಾನೆ ಪ್ರತ್ಯಕ್ಷ

Suddi Udaya

ಬೆಳ್ತಂಗಡಿ: ನಿಡ್ಲೆ ಹಾಗೂ ಪಟ್ರಮೆ ಪರಿಸರದಲ್ಲಿ ಕಾಡಾನೆಗಳು ದಾಳಿ ಮಾಡಿದ್ದು ಬಾಳೆಗಿಡಗಳಿಗೆ ಹಾನಿ ಉಂಟಾದ ಘಟನೆ ಜೂ 2 ರಂದು ನಡೆದಿದೆ.

ಎರಡು ಮೂರು ದಿವಸಗಳಿಂದ ನಿಡ್ಲೆ ಪರಿಸರದಲ್ಲಿ ಕಾಣಿಸಿಕೊಂಡ ದೊಡ್ಡ ಆನೆ ಹಾಗೂ ಮರಿ ಆನೆ ಜೂ 2 ರಂದು ನಿಡ್ಲೆ ಶಾಲಾ ಬಳಿಯಿಂದ ಪಟ್ರಮೆ ರಸ್ತೆಯ ಮೂಲಕ ಸಾಗುವ ವೇಳೆ ಬಾಳೆಗಿಡಗಳಿಗೆ ಹಾನಿ ಮಾಡಿದೆ. ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಸಂಚರಿಸಲು ಭಯಪಡುವ ವಾತಾವರಣ ಸೃಷ್ಟಿಯಾಗಿದೆ.

Leave a Comment

error: Content is protected !!