37.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ನಡ: ರಸ್ತೆಯ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಹೊಡೆದಾಟ: ಹಲವರು ಗಾಯ

ನಡ : ಇಲ್ಲಿಯ ದೇರ್ಲಕ್ಕಿ ಎಂಬಲ್ಲಿ ರಸ್ತೆಯ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಸದಸ್ಯರು ಪರಸ್ಪರ ಹೊಡೆದಾಡಿಕೊಂಡು ಹಲವರು ಗಾಯಗೊಂಡ ಘಟನೆ ಜೂ 4 ರಂದು ಸಂಭವಿಸಿದೆ.


ಇಲ್ಲಿನ ನಿವಾಸಿಗಳಾಗಿರುವ ಓಬಯ್ಯ ಗೌಡ ಹಾಗೂ ವಿಜಯ ಗೌಡ ಎಂಬವರ ಕುಟುಂಬಗಳ ಮದ್ಯೆ ಕಳೆದ 35 ವರ್ಷಗಳಿಂದ ರಸ್ತೆಯ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದವಿದ್ದು ಇದೇ ಕಾರಣಕ್ಕೆ ಎರಡೂ ಕುಟುಂಬಗಳ ಸದಸ್ಯರು ಭಾನುವಾರ ಕತ್ತಿ, ಹಾರೆ ಕೋಲುಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಎರಡೂ ಕುಟುಂಬದವರು ಇದೀಗ ಆಸ್ಪತ್ರೆಗೆ ದಾಖಲಾಗಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಓಬಯ್ಯ ಗೌಡ ಅವರು ನೀಡಿರುವ ದೂರಿನಂತೆ ಮನೆಗೆ ಹೋಗುವ ರಸ್ತೆಯನ್ನು ಚರಳು ಹಾಕಿ ಸರಿಮಾಡುತ್ತಿದ್ದ ವೇಳೆ ಅವರ ನೆರೆಮನೆಯಲ್ಲಿರುವ ಚಿಕ್ಕಪ್ಪ ಪೂವಪ್ಪ ಗೌಡ ಲಲಿತ, ವಿಜಯ ಗೌಡ, ಶ್ರೀನಿವಾಸ ಗೌಡ, ಕೃಷ್ಣಪ್ಪ ಗೌಡ ಅವರು ಅಲ್ಲಿಗೆ ಬಂದು ಮರದ ದೊಣ್ಣೆ, ಸರಳು, ಚೂರಿ, ಕಲ್ಲುಗಳಿಂದ ತಮ್ಮ ಮೇಲೆ ಹಾಗೂ ತಮ್ಮೊಂದಿಗಿದ್ದ ಬೇಬಿ ಗೌಡ, ಭವಾನಿ, ರಜನಿ, ಕೇಶವ ಗೌಡ, ಸುಧಾಕರ ಗೌಡ, ರವಿ ಗೌಡ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಿಸಲಾಗಿದೆ.


ಮತ್ತೊಂದು ಪ್ರಕರಣದಲ್ಲಿ ವಿಜಯ ಗೌಡ ಅವರು ಈ ಬಗ್ಗೆ ದೂರು ನೀಡಿದ್ದು ವ್ಯಾಜ್ಯ ಇರುವ ತಮ್ಮ ತೋಟದ ನಡುವೆ ಹಾದು ಹೋಗುವ ರಸ್ತೆಗೆ ಬಂದ ಓಬಯ್ಯ ಗೌಡ ಹಾಗೂ ಇತರರು ತೋಟದ ನಡುವೆ ರಸ್ತೆ ಸಮತಟ್ಟು ಮಾಡಲು ಮುಂದಾಗಿದ್ದು ಇದನ್ನು ಪ್ರಶ್ನಿಸಿದ ತನ್ನ ಮೇಲೆ ಹಾಗೂ ಬೊಬ್ಬೆ ಕೇಳಿ ಮನೆಯಿಂದ ಬಂದ ಪೂವಪ್ಪ ಗೌಡ, ಲಲಿತ, ವಿಜಯ ಗೌಡ, ಶ್ರೀನಿವಾಸ ಗೌಡ,ಹಾಗೂ ಕೃಷ್ಣಪ್ಪ ಗೌಡ ಅವರ ಮೇಲೆ ಕಲ್ಲು ದೊಣ್ಣೆಗಳಿಂದ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ‌ ಈ ಬಗ್ಗೆಯೂ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದೀಗ ಎರಡೂ ಕಡೆಯವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

Related posts

ರೆಖ್ಯ : 24 ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ರಚನೆ

Suddi Udaya

ಬೆಳ್ತಂಗಡಿ: ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಸಹಾಯಧನ ವಿತರಣೆ

Suddi Udaya

ಎಸ್ ಡಿ ಎಂ ಕಾಲೇಜು ಬಿ.ವೋಕ್ ವಿಭಾಗದ ವಿದ್ಯಾರ್ಥಿಗಳಿಗೆ ಹೈಪರ್ ಲೋಕಲ್ ನ್ಯೂಸ್ ಮೀಡಿಯಾದ ಮಾಹಿತಿ ಕಾರ್ಯಗಾರ

Suddi Udaya

ಹಾಪ್ ಕಾಮ್ಸ್ ನಿರ್ದೇಶಕರಾಗಿ  ರತ್ನರಾಜ್ ಪೇರಂದಬೈಲ್ ಆಯ್ಕೆ        

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಗುರುಮಿಠ್ಕಲ್ ಕ್ಷೇತ್ರದ ಶಾಸಕ ಶರಣ್ ಗೌಡ ಕಂದಕೂರ ಭೇಟಿ

Suddi Udaya

ಧರ್ಮಸ್ಥಳ: ಬಂಟರ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ನಿಧನ

Suddi Udaya
error: Content is protected !!