ಮಿತ್ತಬಾಗಿಲು ಸ. ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ಮಿತ್ತಬಾಗಿಲು : ಇಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭವು ಶಾಲೆಯ ಎಲ್ಲಾ ಮಕ್ಕಳಿಗೆ ಮುರಳಿ.ಬಿ ವಕೀಲರು ನೋಟರಿ ಪಬ್ಲಿಕ್ ಬೆಳ್ತಂಗಡಿ ಇವರು ಪುಸ್ತಕ ವಿತರಿಸಿ, ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಹಿತವಚನ ನೀಡಿದರು. ಹಾಗೆಯೇ ಅವರ ಕುಟುಂಬಸ್ಥರಾದ ಶ್ರೀಮತಿ ಮನೋರಮ ಮಕ್ಕಳಾದ ಮಯೂರ ಹಾಗೂ ಮಂದಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಹೈದರ್ ಆಲಿ ವಹಿಸಿದ್ದರು.
ಸಮಾರಂಭಕ್ಕೆ ಅತಿಥಿಗಳಾಗಿ ಕಾಜೂರು ದರ್ಗಾ ಸಮಿತಿ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಜೆ.ಎಚ್, ಸದಸ್ಯರಾದ ಮುಹಮ್ಮದ್ ಆಲಿ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದಲ್ಲಿ ಮಿತ್ತಬಾಗಿಲು ಶಾಲಾ SDMC ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕವೃಂದ ಪೋಷಕರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶ್ರೀಮತಿ ರಾಜಿ ಮೋಳ್ ನಿರೂಪಿಸಿದರು. ಅಣ್ಣಪ್ಪ.ಎಸ್ ಧನ್ಯವಾದವಿತ್ತರು. ರವಿ. ಪಿ ಕಾರ್ಯಕ್ರಮವನ್ನು ಸಂಯೋಜಿಸಿದರು.

Leave a Comment

error: Content is protected !!