ಅಳದಂಗಡಿ:ನಿಸ್ವಾರ್ಥ ಸೇವೆಗೆ ಸ್ಪೂರ್ತಿಯ ಸೆಲೆಯಾದ ರವಿಕಟಪಾಡಿ: ಕಿರ್ತನ್ ಅವರ ವೈದ್ಯಕೀಯ ಚಿಕಿತ್ಸೆಗೆ ರೂ.10 ಸಾವಿರ ಹಸ್ತಾಂತರ

Suddi Udaya

ಅಳದಂಗಡಿ :ಶ್ರೀ ಸತ್ಯದೇವತೆ ದೈವಸ್ಥಾನದಲ್ಲಿ ನಡೆದ ಪುಸ್ತಕ ವಿತರಣೆಯ ಸಮಾರೋಪ ಸಮಾರಂಭದಲ್ಲಿ ಸಮಾಜ ಸೇವಕ ರವಿ ಕಟಪಾಡಿ ಯವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ್ ಅಜಿಲರು ರವಿ ಕಟಪಾಡಿಯವರ ಸಮಾಜಮುಖಿ ಕೆಲಸ ಕಾರ್ಯಕ್ಕೆ ದೈವಸ್ಥಾನದ ವತಿಯಿಂದ ರೂ 10 ಸಾವಿರ ನೀಡಿ ಅಶಕ್ತರಿಗೆ ನೀವು ವಿನಿಯೋಗಿಸಿ, ಇದೊಂದು ನಮ್ಮ ಪುಟ್ಟ ಅಳಿಲು ಸೇವೆ ಎಂದರು. ಇದನ್ನು ಸ್ವೀಕರಿಸಿದ ರವಿಕಟಪಾಡಿಯವರು ಕೆಲವೇ ಕೆಲವು ಹೊತ್ತಿನಲ್ಲಿ ವೇದಿಕೆಯಿಂದ ಕೆಳಗಿಳಿಯುತ್ತಲೆ ಅಳದಂಗಡಿ ಪರಿಸರದ ಯುವಕ ಅನಾರೊಗ್ಯದಿಂದ ಬಳಲುತ್ತಿರುವ ಕೀರ್ತನ್ ಇವರಿಗೆ ಆ ಮೊತ್ತವನ್ನು ಹಸ್ತಾಂತರಿಸಿ ಮಾನವೀಯತೆ ಮೆರೆದರು. ನಿಜವಾಗಿಯು ರವಿಕಟಪಾಡಿಯವರು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಒಂದಷ್ಟು ಕ್ಷಣ ಯೋಚಿಸದೆ ಆ ಕ್ಷಣವೆ ಮಿಡಿದ ಮನಸ್ಸಿಗೆ ನಾವುಗಳು ಮೂಕವಿಸ್ಮಿತರಾದೆವು. ರವಿ ಕಟಪಾಡಿಯವರಿಗೆ ಅಳದಂಗಡಿಯ ಶ್ರೀ ಸತ್ಯದೇವತೆ ಹಾಗೂ ಶ್ರೀ ಸೋಮನಾಥೇಶ್ವರಿ ಅಮ್ಮನವರ ಶ್ರೀ ರಕ್ಷೆ ಸದಾ ಕಾಲ ಇರಲೆಂದು ಅಳದಂಗಡಿಯ ಯುವಕರು ಆಶಿಸಿದರು.

Leave a Comment

error: Content is protected !!