25.4 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ದರ್ಭೆತಡ್ಕ ಸುದೆಗಂಡಿಯಲ್ಲಿ ಕಿರು ಸೇತುವೆಯ ದುರಸ್ತಿ ಕಾರ್ಯದ ಬಗ್ಗೆ ಗ್ರಾಮಸ್ಥರ ಸಭೆ: ಸಮಿತಿ ರಚನೆ

ಹತ್ಯಡ್ಕ : ಹತ್ಯಡ್ಕ ಗ್ರಾಮದ ದರ್ಭೆತಡ್ಕ ಸುದೆಗಂಡಿ ಕಪಿಲಾನದಿ ಕಿರು ಸೇತುವೆಯು ಶಿಥಿಲಾವಸ್ಥೆಯಲ್ಲಿರುವುದರಿಂದ ಅದರ ದುರಸ್ತಿ ಕೆಲಸ ನಡೆಸುವ ಬಗ್ಗೆ ದರ್ಭೆತಡ್ಕ ಶ್ರೀ ಪರಶುರಾಮ ದೇವಸ್ಥಾನದ ಸಭಾಂಗಣದಲ್ಲಿ ಗ್ರಾಮಸ್ಥರ ಸಭೆ ಜೂ.19 ರಂದು ನಡೆಯಿತು.
ಅರಸಿನಮಕ್ಕಿ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಸೌಮ್ಯಾ ತುಳುಪುಳೆ ಹಾಜರಿದ್ದರು.


ಈ ಸಂದರ್ಭದಲ್ಲಿ ಕಪಿಲಾನದಿ ಸೇತುವೆ ದುರಸ್ತಿ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಕರುಣಾಕರ ಗೋಗಟೆ ಹೊಸ್ಮಠ. ಕಾರ್‍ಯದರ್ಶಿಯಾಗಿ ಪ್ರಶಾಂತ್ ಹೆಬ್ಬಾರ್ ನೆಲ್ಲಿತಡ್ಕ ಆಯ್ಕೆಯಾದರು. ಶೀಘ್ರದಲ್ಲಿ ಪಂಚಾಯತ್ ಗ್ರಾಮಸ್ಥರ ಸಹಕಾರದೊಂದಿಗೆ ಸೇತುವೆ ದುರಸ್ತಿ ಕೆಲಸ ಮಾಡುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಜೋಸೆಫ್ ಪಿರೇರಾ, ವೆಂಕಟೇಶ ಮೆಹೆಂದಳೆ, ಕಾಶಿನಾಥ ಗೋಗಟೆ, ವಾಮನ ತಾಮ್ಹನ್‌ಕರ್, ಧರ್ಮರಾಜ ಗೌಡ, ನರಸಿಂಹ ಪಾಳಂದೆ, ಉದಯಕುಮಾರ್ ಅಭ್ಯಂಕರ್, ವರದಶಂಕರ ದಾಮ್ಲೆ, ರಾಜೇಶ್ ಬೊಳ್ಳೋಡಿ ಉಪಸ್ಥಿತರಿದ್ದರು.

Related posts

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಸರ್ ಮಿರ್ಜಾ ಇಸ್ಮಾಯಿಲ್ ರವರ 138 ನೇ ಜನ್ಮ ದಿನಾಚರಣೆ’

Suddi Udaya

ನಾವೂರು 25ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ: ಧಾರ್ಮಿಕ ಸಭೆ

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಅಧಿಕಾರ ಅವಧಿ ಮುಕ್ತಾಯ : ಆಡಳಿತಾಧಿಕಾರಿ ನೇಮಕ ಸಾಧ್ಯತೆ

Suddi Udaya

ಬೆಳಾಲು ನಿವೃತ್ತ ಶಿಕ್ಷಕನ ಬರ್ಬರ ಕೊಲೆ ಪ್ರಕರಣ: ಸ್ಥಳಕ್ಕೆ ಎಸ್ಪಿ ಸೇರಿದಂತೆ ವಿವಿಧ ತಂಡದಿಂದ ತನಿಖೆ

Suddi Udaya

ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಕದಿರು (ತೆನೆ) ಹಬ್ಬ 

Suddi Udaya

ಶ್ರೀ ಭಗವದ್ಗೀತಾ ಅಭಿಯಾನ – 2023: ಬೆಳ್ತಂಗಡಿ ತಾಲೂಕು ಮಟ್ಟದ ಭಗವದ್ಗೀತಾ ಸ್ಪರ್ಧೆಗಳು

Suddi Udaya
error: Content is protected !!