April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಅನ್ನಭಾಗ್ಯಕ್ಕೆ ಅಕ್ಕಿ ನೀಡದ ಕೇಂದ್ರ ಸರಕಾರದ ವಿರುದ್ಧ ಅನ್ನದ ತಟ್ಟೆ ಬಡಿದು ಬ್ಲಾಕ್ ಕಾಂಗ್ರೆಸ್‌ನಿಂದ ಪ್ರತಿಭಟನೆ

ಬೆಳ್ತಂಗಡಿ: ರಾಜ್ಯ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಅನ್ನಭಾಗ್ಯಕ್ಕೆ ಕೇಂದ್ರ ಸರಕಾರ ಅಕ್ಕಿ ಕೊಡದೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅನ್ನದ ತಟ್ಟೆ ಬಡಿಯುವ ಪ್ರತಿಭಟನೆ ಜೂ.20 ರಂದು ಬೆಳ್ತಂಗಡಿ ಮಿನಿವಿಧಾನ ಸೌಧದ ಎದರು ನಡೆದು ನಂತರ ಅಕ್ಕಿ ಒದಗಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.


ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಗೃಹಲಕ್ಷ್ಮೀ ಮತ್ತು ಭಾಗ್ಯಲಕ್ಷ್ಮೀ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾಜಿ ಶಾಸಕ ವಸಂತ ಬಂಗೇರರ ನೇತೃತ್ವದಲ್ಲಿ ಕಾರ್ಯಕರ್ತರು ‘ಕೇಂದ್ರ ಸರಕಾರ ರಾಜ್ಯಕ್ಕೆ ಅಕ್ಕಿ ಕೊಡದೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ, ಅನ್ನದ ತಟ್ಟೆಯನ್ನು ಕೈಯಲ್ಲಿ ಹಿಡಿದು ಬಡಿಯುತ್ತಾ ರಸ್ತೆಯ ಮೂಲಕ ಮೆರವಣಿಗೆಯಲ್ಲಿ ಮಿನಿ ವಿಧಾನ ಸೌಧಕ್ಕೆ ತೆರಳಿದರು. ಅಲ್ಲಿ ತಟ್ಟೆ ಬಡಿದು ಪ್ರತಿಭಟನೆ ವ್ಯಕ್ತಪಡಿಸಿ, ನಂತರ ಅನ್ನ ಭಾಗ್ಯಕ್ಕೆ ಅಕ್ಕಿಯನ್ನು ಒದಗಿಸುವಂತೆ ಪ್ರಧಾನಿಯವರಿಗೆ ತಹಸೀಲ್ದಾರ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ , ಜಿ.ಪಂ. ಮಾಜಿ ಸದಸ್ಯರಾದ ಶೇಖರ್ ಕುಕ್ಕೇಡಿ, ನಮೀತಾ ಪೂಜಾರಿ, ಹಿರಿಯರಾದ ರಾಜು ಪೂಜಾರಿ ಕಾಶಿಪಟ್ನ , ಶ್ರೀನಿವಾಸ್ ಉಜಿರೆ ,ಸತೀಶ್ ಕೆ ಕಾಶಿಪಟ್ನ, ಜಯವಿಕ್ರಂ, ಅಬ್ದುಲ್ ಕರೀಂ ಗೇರುಕಟ್ಟೆ ,ಸತೀಶ್ ಹೆಗ್ಡೆ ವೇಣೂರು ,ಅರವಿಂದ ಶೆಟ್ಟಿ ಖಂಡಿಗ ,ಹರೀಶ್ ಪೊಕ್ಕಿ ,ರಮೇಶ್ ಪಡ್ಡಯಿಮಜಲು, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶ್ರೀಮತಿ ವಂದನಾ ಭಂಡಾರಿ, ಜೆಸಿಂತಾ ಮೋನಿಸ್, ಹರಿಪ್ರಸಾದ್ ಹೊಸಂಗಡಿ ,ಮುಖಂಡರಾದ ಅಯೂಬ್ ಡಿ.ಕೆ ಕಲ್ಲೇರಿ, ವಿನ್ಸೆಂಟ್ ಡಿ ಸೋಜ ಮಡಂತ್ಯಾರು ,ಇಸ್ಮಾಯಿಲ್ ಕೆ ಪೆರಿಂಜೆ, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಮ್, ಮರಿತ ಪಿಂಟೋ ,ಪ್ರವೀಣ್ ಗೌಡ ,ಅಶ್ರಫ್ ಶಾಂತಿನಗರ , ಸೇರಿದಂತೆ ಪಕ್ಷದ ಮುಖಂಡರುಗಳು ಕಾರ್ಯಕರ್ತರುಗಳು ಪಾಲ್ಗೊಂಡರು.

Related posts

ನಾಪತ್ತೆಯಾಗಿದ್ದ ಮಾಚಾರು ನಿವಾಸಿ ಆಟೋ ಚಾಲಕ ಸುಧಾಕರ್ ಮೃತದೇಹ ನೆಲ್ಲಿಕಾರ್ ಕಾಡಿನಲ್ಲಿ ನೇಣು ಹಾಕಿಕೊಂಡ ರೀತಿಯಲ್ಲಿ ಪತ್ತೆ

Suddi Udaya

ಹೈದರಾಬಾದಿನಲ್ಲಿ ನಡೆದ ವಿದ್ಯಾ ಭಾರತೀಯ ಕ್ಷೇತ್ರಿಯ ಮಟ್ಟದ ಎತ್ತರ ಜಿಗಿತ ಸ್ಪರ್ಧೆ: ಸುಶಾಂತ್ ಎಸ್ ಪೂಜಾರಿ ಕುದ್ಯಾಡಿ ಪ್ರಥಮ‌ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya

ಮಚ್ಚಿನ ಗ್ರಾ.ಪಂ. ನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ರಕ್ತದಾನ ಶಿಬಿರ

Suddi Udaya

ಡಿ.7 ಧರ್ಮಸ್ಥಳದಲ್ಲಿ ಪದಾಧಿಕಾರಿಗಳ ಸಹಮಿಲನ ಹಾಗೂ ವ್ಯಸನ ಮುಕ್ತರ ಕುಟುಂಬೋತ್ಸವ

Suddi Udaya

ಮಾಜಿ ಶಾಸಕ ಕೆ ವಸಂತ ಬಂಗೇರ ನಿಧನಕ್ಕೆ ಬೆಳ್ತಂಗಡಿ ಬಿಷಪ್ ಲಾರೆನ್ಸ್ ಮುಕ್ಕುಯಿ ರವರಿಂದ ಸಂತಾಪ

Suddi Udaya

ಲಾಯಿಲ : ಡಿಸೇಲ್ ಇಲ್ಲದೆ ಕೈಕೊಟ್ಟ ಕೆಎಸ್ಸಾರ್ಟಿಸಿ ಬಸ್: ಸಂದಿಗ್ಧ ಸ್ಥಿತಿಯಲ್ಲಿ ಪ್ರಯಾಣಿಕರು

Suddi Udaya
error: Content is protected !!