ಸ್ತುತಿರವರ ಹುಟ್ಟುಹಬ್ಬದ ಪ್ರಯುಕ್ತ ಉರುಂಬಿದೊಟ್ಟು ಅಂಗನವಾಡಿಯ ಸುತ್ತ ಗಿಡಗಂಟಿಗಳ ಸ್ವಚ್ಛತೆ ಹಾಗೂ ತೆಂಗಿನ ಗಿಡ ನೆಡುವ ಮೂಲಕ ಆಚರಣೆ

Suddi Udaya

ಶಿರ್ಲಾಲು : ಶ್ರೀಮತಿ ಚಂದನ ಮತ್ತು ಸುರೇಶ ನಾಯ್ಕರ ಮಗಳಾದ ಸ್ತುತಿ ಇವರ ಹುಟ್ಟಿದ ಹಬ್ಬವನ್ನು ಶಿರ್ಲಾಲು ಗ್ರಾಮದ ಉರುಂಬಿದೊಟ್ಟು ಅಂಗನವಾಡಿ ಕೇಂದ್ರದ ಸುತ್ತ ಗಿಡಗಂಟಿಗಳ ಸ್ವಚ್ಛತೆಯನ್ನು ಮಾಡುವುದರ ಮೂಲಕ ಹಾಗೂ ತೆಂಗಿನ ಗಿಡವನ್ನು ನೆಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭ ಅಂಗನವಾಡಿ ಮಕ್ಕಳಿಗೆ ಪೆನ್ಸಿಲ್ ಮತ್ತು ಸಿಹಿ ತಿಂಡಿಯನ್ನು ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ಪವಿತ್ರ ಮತ್ತು ಸಹಾಯಕಿಯಾದ ಲವೀನ ಡಿಸೋಜರವರು ಸಹಕರಿಸಿದರು. ಪಂಚಾಯತ್ ಸದಸ್ಯರಾದ ಮಾಧವ ರವರು ತೆಂಗಿನ ಗಿಡವನ್ನು ನೀಡಿ ಸಹಕರಿಸಿದರು. ಜನಾರ್ದನ ಪಲ್ಲದಪಾಲ್ಕೆ. ವಿಶ್ವನಾಥ ಕೆಮ್ಮಡೇ. ಸುಧಾಕರ್ ಗುರುಮಾಜಲ್. ಸುರೇಶ್ ಕುರೆವೂರು. ಇವರು ಸ್ವಚಾತೇ ಯಲ್ಲಿ ಸಹಕರಿಸಿದರು.

Leave a Comment

error: Content is protected !!