September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಗಿಡ ನಾಟಿ ಉತ್ಸವ

ಬೆಳ್ತಂಗಡಿ : ರೋಟರಿ ಕ್ಲಬ್ ಇದರ ವನಸಿರಿ ಕಾರ್ಯಕ್ರಮದಲ್ಲಿ ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ರೋಟರಿ ಮಂಗಳೂರು ಡೌನ್ ಟೌನ್, ಮುಂಡಾಜೆ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್, ರೇಂಜರ್ಸ್, ರೋವರ್ಸ್ ತಂಡಗಳ ಸಹಕಾರದಲ್ಲಿ ಗಿಡ ನಾಟಿ ಹಾಗೂ ಬಿತ್ತೋತ್ಸವ ನಡೆಸಲಾಯಿತು. ಜು.16 ರಂದು ನಡೆಯಿತು.

ಹತ್ತು ಬಗೆಯ ವಿವಿಧ ಹಣ್ಣುಗಳ 100 ಗಿಡಗಳ ನಾಟಿ ಹಾಗೂ 25,000ಕ್ಕೂ ಅಧಿಕ ಬೀಜಗಳನ್ನು ಬಿತ್ತಲಾಯಿತು.

ರೋಟರಿ ಜಿಲ್ಲಾ ಕಾರ್ಯದರ್ಶಿ (ತರಬೇತಿ) ಹರೀಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಅನಂತ ಭಟ್, ಕಾರ್ಯದರ್ಶಿ ವಿದ್ಯಾ ಕುಮಾರ್, ಕುಲಸಚಿವರು ಶ್ರೀಕಾಂತ್ ಕಾಮತ್, ಧನಂಜಯ ರಾವ್, ಶ್ರೀಧರ್, ಪ್ರಕಾಶ್ ನಾರಾಯಣ್, ಕುಲಪತಿ ಡಾ. ರೋ. ಕಿರಣ್ ಹೆಬ್ಬಾರ್, ರೋ. ವಿವೇಕ್ ಸಂಪತ್ ಅರಿಗ, ರೋ. ನಾರಾಯಣ ಭಿಡೆ, ರೋ. ಉದಯಶಂಕರ್, ರೋ. ಅಬೂಬಕ್ಕರ್ & Anns, Annets, ರೋಟರಿ ಮಂಗಳೂರು ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು, ಅರಣ್ಯ ವೀಕ್ಷಕರು ಉಪಸ್ಥಿತರಿದ್ದರು.

150ಕ್ಕೂ ಅಧಿಕ ಭತ್ತದ ತಳಿಗಳ ಸಂರಕ್ಷಣೆ ಮಾಡಿರುವ ಹಿರಿಯ ಕೃಷಿಕ ಮಿತ್ತಬಾಗಿಲಿನ ದೇವರಾಜ್ ಬಿ.ಕೆ. ಅವರನ್ನು ಗೌರವಿಸಲಾಯಿತು.

Related posts

ಅಳದಂಗಡಿ ಶ್ರೀ ಸೋಮನಾಥೇಶ್ವರೀ ಸನ್ನಿಧಿಯಲ್ಲಿ ಧೃಡ ಕಲಶ ಹಾಗೂ ಅಭಿನಂದನಾ ಸಮಾರಂಭ

Suddi Udaya

ತಾಲೂಕು ಮಟ್ಟದ ಚದುರಂಗ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ನಾವೂರು: ನಿoರ್ದಿ ಬಳಿ ರಸ್ತೆಗೆ ಬಿದ್ದ ಮರ ಗ್ರಾ.ಪಂ. ನಿಂದ ತೆರವು ಕಾರ್ಯ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

Suddi Udaya

ಬಂದಾರು: ತೀರ ಹದಗೆಟ್ಟ ರಸ್ತೆ; ದುರಸ್ತಿಗೊಳಿಸುವಂತೆ ಸ್ಥಳೀಯರ ಮನವಿ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಲಕರಣೆಗಳ ಶುದ್ಧೀಕರಣಕ್ಕೆ ಹೊಸ ಎಥಿಲೀನ್ ಆಕ್ಸೈಡ್ ಯಂತ್ರ ಅಳವಡಿಕೆ

Suddi Udaya
error: Content is protected !!