ಉಜಿರೆಯಲ್ಲಿ ಸಹನಶ್ರೀ ಸಹಕಾರಿ ಸೊಸೈಟಿಯ ಕಚೇರಿ ಉದ್ಘಾಟನೆ

Suddi Udaya

ಉಜಿರೆ: ಉಜಿರೆಯ ಕಾಶಿಬೆಟ್ಟುವಿನ ರಾಜ ರಾಜೇಶ್ವರಿ ಸಂಕೀರ್ಣದಲ್ಲಿ ಸಹನಶ್ರೀ ಸೌಹಾರ್ದ ಸಹಕಾರಿ ಸೊಸೈಟಿಯ ನೂತನ ಕಛೇರಿಯ ಕಟ್ಟಡದ ಉದ್ಘಾಟನೆಯು ಜೂ.28 ರಂದು ನಡೆಯಿತು.

ಬಂಗಾಡಿ ಮರಿಯಾ೦ಬಿಕ ಚರ್ಚಿನ ಧರ್ಮ ಗುರುಗಳಾದ ವಂದನಿಯ ಫಾ| ಸೇಬಾಸ್ಟಿನ್ ಸಿ ಕೆ ನೇತೃತ್ವದಲ್ಲಿ ಕೆ ಎಸ್ ಎಂ ಸಿ ಎ ನಿರ್ದೇಶಕರು ನೆಲ್ಯಾಡಿ ಅಲ್ಫೋನ್ಸ ಪಿಲ್ಗ್ರಿಮ್ ಚರ್ಚ್ ನ ವಂದನಿಯ ಫಾ| ಶಾಜಿ ಮಾತ್ಯು, ದೇವಗಿರಿ ಚರ್ಚ್ ನ ವಂದನಿಯ ಫಾ. ಸಿರಿಲ್ ಪ್ರಾರ್ಥನಾ ವಿಧಿಗಳನ್ನು ನೆರವೇರಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಸೊಸೈಟಿಯ ಅಧ್ಯಕ್ಷರು ನೈರುತ್ಯ ರೈಲ್ವೆ ಸಮಿತಿಯ ಸದಸ್ಯರು ಆದ ರಾಜೇಶ್ ಪುದುಶೇರಿ, ಅಭಿಲಾಶ್ ವಾಳೂಕಾರನ್, ಸಣ್ಣಿ ಮುಟ್ಟತ್, ಜೋಯ್, ಆಗಸ್ತಿ, ಸಜಿ ಓ ಎಂ ಮೊದಲಾದವರು ಉಪಸ್ಥಿತರಿದ್ದರು.

Leave a Comment

error: Content is protected !!