ಗೇರುಕಟ್ಟೆ: ಪರಪ್ಪು ಮಸೀದಿಯಲ್ಲಿ ಬಕ್ರೀದ್ ಆಚರಣೆ

Suddi Udaya

ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಈದುಲ್ ಅದಾ ಹಬ್ಬದ ಸಾಮೂಹಿಕ ಪ್ರಾರ್ಥನೆ ಖತೀಬರಾದ ತಾಜುದ್ದೀನ್ ಸಖಾಫಿ ರವರ ನೇತೃತ್ವದಲ್ಲಿ ನಡೆದು ಸಮಾಜಕ್ಕೆ ಶಾಂತಿ ಸೌಹಾರ್ಧತೆಯ ಮತ್ತು ಬಕ್ರಿದ್ ಹಬ್ಬದ ಉತ್ತಮ ಸಂದೇಶವನ್ನು ನೀಡಿದರು.

ನಂತರ ಸಾಮೂಹಿಕ ದರ್ಗಾ ಝಿಯಾರತ್ ನೆರವೇರಿಸಲಾಯಿತು.
ಆಡಳಿತ ಸಮಿತಿಯ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ, ಪ್ರದಾನ ಕಾರ್ಯದರ್ಶಿ ಅಬ್ದುಲ್ ಕರೀಮ್ ಗೇರುಕಟ್ಟೆ, ಸಮಿತಿಯ ಉಪಾದ್ಯಕ್ಷರಾದ ಕಾದರ್ ಹಾಜಿ, ಬಶೀರ್, ಅಬ್ದುಲ್ ಖಾದರ್, ಎಸ್.ಎ ಬಶೀರ್, ಪದಾಧಿಕಾರಿಗಳು, ಅಧೀನ ಸಮಿತಿಗಳಾದ ದರ್ಗಾ ಕಟ್ಟಡ ಸಮಿತಿ, ಎಸ್ ವೈ ಎಸ್ ಸಮಿತಿ, ಸ್ವಲಾತ್ ಸಮಿತಿ, ಎಸ್.ಎಸ್.ಎಫ್ ಸಮಿತಿಗಳ ಪದಾಧಿಕಾರಿಗಳು ಮತ್ತು ಜಮಾಅತರು ಉಪಸ್ಥಿತರಿದ್ದರು.

Leave a Comment

error: Content is protected !!