ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆಯಲ್ಲಿ ವನಮಹೋತ್ಸವ

Suddi Udaya

ತೆಂಕಕಾರಂದೂರು: ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ,ಮೂಡಬಿದ್ರೆ ಉಪವಿಭಾಗ ಹಾಗೂ ವೇಣೂರು ವಲಯದ ವತಿಯಿಂದ ವನಮಹೋತ್ಸವ ಸಸಿ ನೆಡುವ ಕಾರ್ಯಕ್ರಮ ವನ್ನು ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ ಯಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ವೇಣೂರು ವಲಯ ಅಳದಂಗಡಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಸುರೇಶ್ ಗೌಡ, ಗಸ್ತು ಪಾಲಕರಾದ ಮಂಜುನಾಥ್ ಸವಳಿ , ಬಳಂಜ ಗ್ರಾಮ ಪಂಚಾಯತ್ ಸದಸ್ಯರಾದ ಹೇಮಂತ್ ಗುಂಡೇರಿ, ಬದ್ರಿಯಾ ಆಡಳಿತ ಸಮಿತಿ ಅಧ್ಯಕ್ಷರಾದ ನವಾಜ್ ಶರೀಫ್ ಕಟ್ಟೆ, ಮಸೀದಿ ಸದಸ್ಯರಾದ ಕಾಸಿಂ ಗಿಂಡಾಡಿ, ರಫೀಕ್ ಪುತ್ತು , ನಾಸಿರ್ ಗಿಂಡಾಡಿ ಹಾಗೂ ಊರಿನ ಇತರ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!