September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಡಂತ್ಯಾರು: ವರ್ತಕ ಬಂಧು ಸಹಕಾರ ಸಂಘ ಉದ್ಘಾಟನೆ

ಮಡಂತ್ಯಾರು: ವಾಣಿಜ್ಯ, ಕೈಗಾರಿಕೆ ಮತ್ತು ಸೇವಾ ಉದ್ದಿಮೆದಾರರ ಸಂಘ ಮಡಂತ್ಯಾರು-ಪುಂಜಾಲಕಟ್ಟೆ ಇವರ ಪ್ರಾಯೋಜಕತ್ವದಲ್ಲಿ ವರ್ತಕ ಬಂಧು ಸಹಕಾರ ಸಂಘವು ವರ್ತಕರಿಂದ ವರ್ತಕರಿಗಾಗಿ ವರ್ತಕರಿಗೋಸ್ಕರ ವರ್ತಕರೇ ಪ್ರವರ್ತಿಸಲ್ಪಡುವ ಮಡಂತ್ಯಾರು ವರ್ತಕ ಬಂಧು ಸಹಕಾರ ಸಂಘವು ಅಸ್ತಿತ್ವಕ್ಕೆ ಬಂದಿದ್ದು ಇದರ ಉದ್ಘಾಟನಾ ಸಮಾರಂಭವು ಜು. 9ರಂದು ನಡೆಯಿತು.

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು ವಂ.ಫಾ. ಸ್ಪ್ಯಾನಿ ಗೋವಿಯಸ್ ಅಶೀರ್ವಚನ ಮಾಡಿದರು.

ಬಿ. ಜಯಂತ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು, ಶಾಸಕ ಹರೀಶ್ ಪೂಂಜ ಕಛೇರಿ ಉದ್ಘಾಟನೆ ನೆರವೇರಿಸಿದರು. ಭದ್ರತಾ ಕೋಶ ಉದ್ಘಾಟನೆ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತಸರ ವಿಠಲ ಶೆಟ್ಟಿ ಮುಡಾಯೂರು ದೀಪ ಪ್ರಜ್ವಲನೆ ಮಾಡಿದರು.
ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಕ್ಯಾಶ್ ಸರ್ಟಿಕೆಟ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಯೋಗೀಶ್ ಪೂಜಾರಿ ಕಡ್ತಿಲ, ಮುಖ್ಯ ಸಲಹೆಗಾರರಾದ ಮೋನಪ್ಪ ಪೂಜಾರಿ ಕಂಡತ್ಯಾರ್, ನಿತ್ಯಾನಂದ ಹೆಗ್ಡೆ, ನಿರ್ದೇಶಕರುಗಳಾದ ವಿಜಯಚಂದ್ರ ಮಾಲಾಡಿ, ಉದಯಕುಮಾರ್ ಜೈನ್, ಕಾಂತಪ್ಪ ಗೌಡ, ಗಿರೀಶ್ ಪೈ, ಪ್ರಶಾಂತ್ ಶೆಟ್ಟಿ, ತುಳಸಿದಾಸ್ ಪೈ, ಯಶೋಧರ ಬಂಗೇರ, ಕಿಶೋರ್ ಶೆಟ್ಟಿ, ವಿನೋದ್ ಬಾಳಿಗ, ಹೈದರ್ ಬಿ., ಅಶೋಕ್ ಹೆಚ್, ಗೋಪಾಲಕೃಷ್ಣ ಕೆ., ಶ್ರೀಮತಿ ಡಿಗ್ನ ಮೊರಾಸ್, ಅಮಿತಾ ಲೋಬೊ, ತೆಲ್ಮಾ ಮಾಡ್ತಾರವರು, ಗೌರವ ಸಲಹೆಗಾರರಾದ ಅನಿಲ್ ಕುಮಾರ್ ಅಧಿಕಾರಿ ಪಿ.ಎನ್. ಅಧಿಕಾರಿ & ಸನ್ಸ್ ಮಡಂತ್ಯಾರು, ರವೀಂದ್ರ ಬಾಳಿಗ ಪುಂಡಲೀಕ ಬಾಳಿಗ & ಸನ್ಸ್ ಪುಂಜಾಲಕಟ್ಟೆ, ರತ್ನಾಕರ ಶೆಟ್ಟಿ ಅಮ್ಮ ಮೆಡಿಕಲ್ಸ್ ಮಡಂತ್ಯಾರು, ರಾಜೇಶ್ ರೋಡ್ರಿಗಸ್ ನೂತನ್ ಕ್ಲೋತ್ ಸೆಂಟರ್, ಮಡಂತ್ಯಾರು ಶೇಖ್ ಜವಾಹರ್ ಆಲಿ, ಶಮಾ ಕಾಂಪ್ಲೆಕ್ಸ್, ಮಡಂತ್ಯಾರುವಾಸುದೇವ ಗೌಡ, ಅಕ್ಷಯಾ ಫುಡ್ಸ್, ಪುಂಜಾಲಕಟ್ಟೆ ಓಂ ಪ್ರಸಾದ್, ಪೂಜಾರಿ ವೈನ್ಸ್ ಪುಂಜಾಲಕಟ್ಟೆ ಜಯಪ್ರಕಾಶ್, ಅಶ್ವಿನಿ ಗ್ಲಾಸ್ & ಫೈವುಡ್, ಶ್ರೀ ಅನಂತೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಹರ್ಷ ಸಂಪಿಗೆತ್ತಾಯ, ಮಾಲಾಡಿ ಗ್ರಾ.ಪಂ. ಅಧ್ಯಕ್ಷೆ ಬೇಬಿ ಸುಸ್ಸಾನ ,ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷೆ ಶಶಿಪ್ರಭ , ಬಿ. ವಿ. ಪ್ರತಿಮಾ ಸಹಕಾರ ಅಭಿವೃದ್ಧಿ ಅಧಿಕಾರಿ ಬೆಳ್ತಂಗಡಿ, ಮೋನಪ್ಪ ಪೂಜಾರಿ ಕಂಡತ್ಯಾರು ಸಹಕಾರಿ ಕ್ಷೇತ್ರದ ಮಾರ್ಗದರ್ಶಕರು, ಮ್ಯಾಕ್ಸಿಂ ಕಾರ್ಲ್ ಅಧ್ಯಕ್ಷರು, ಸಮನ್ವಯ ವಿ.ಕೋ.ಸೊಸೈಟಿ, ಮಡಂತ್ಯಾರು, ಅರವಿಂದ ಜೈನ್ ಅಧ್ಯಕ್ಷರು ಕೃಷಿ ಪತ್ತಿನ ಸಹಕಾರಿ ಸಂಘ ಮಡಂತ್ಯಾರು, ಲೆನ್ಸಿ ಪಿಂಟೊ ಅಧ್ಯಕ್ಷರು, ಸೇ. ಹಾ. ಸಹಕಾರಿ ಸಂಘ ಮಡಂತ್ಯಾರು, ಸುಭಾಶ್ಚಂದ್ರ ಜೈನ್ ಅಧ್ಯಕ್ಷರು ವರ್ತಕರ ವಿ.ಸ. ಸಂಘ ಬಂಟ್ವಾಳ, ಪುಷ್ಪರಾಜ್ ಶೆಟ್ಟಿ, ಅಧ್ಯಕ್ಷರು ವರ್ತಕರ ಸಂಘ ಬೆಳ್ತಂಗಡಿ, ಅರವಿಂದ್ ಕಾರಂತ್ ಅಧ್ಯಕ್ಷರು ವರ್ತಕರ ಸಂಘ ಉಜಿರೆ, ಡಾ. ಸೇರಾ, ಮುಖ್ಯಕಾರ್ಯನಿರ್ವಹಣಾಧಿಕಾರಿ ಡೆಲ್ಸನ್ ಮೋನಿ, ಸಿಬ್ಬಂದಿಗಳಾದ ಭಾಗ್ಯಶ್ರೀ ಎಂ. ಮತ್ತು ಶ್ರಾವಣಿ ಸಹಕರಿಸಿದರು.

Related posts

ಬಿಜೆಪಿ ಹತ್ಯಡ್ಕ ಬೂತ್ ಸಂಖ್ಯೆ 216 ರ ಅಧ್ಯಕ್ಷರಾಗಿ ಪ್ರೇಮಚಂದ್ರ ಎಸ್. , ಕಾರ್ಯದರ್ಶಿಯಾಗಿ ರಾಜೇಶ್ ಗೌಡ ಆಯ್ಕೆ

Suddi Udaya

ಬಡೆಕ್ಕಾವುದ ಸತ್ಯೋಲು ಭಕ್ತಿ ಸುಗಿಪು ವೀಡಿಯೋ-ಆಡಿಯೋ ಆಲ್ಬಮ್ ಸಾಂಗ್ ಬಿಡುಗಡೆ

Suddi Udaya

ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಒಂದು ಹಾಗೂ ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ “ಮಕ್ಕಳಿಗಾಗಿ ಕಥೆ” ಕಾರ್ಯಕ್ರಮ

Suddi Udaya

ಪತ್ನಿ-ಮಗಳ ಮೇಲೆ ಪತಿಯಿಂದ ಮಾರಾಣಾಂತಿಕ ಹಲ್ಲೆ: ಇಬ್ಬರು ಆಸ್ಪತ್ರೆಗೆ ದಾಖಲು: ಪೊಲೀಸರ ತನಿಖೆ

Suddi Udaya

ಜೆಸಿ ಸಪ್ತಾಹಕ್ಕೆ 3 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಜೆಸಿಐ ಮಡಂತ್ಯಾರಿನಿಂದ ವರ್ಣರಂಜಿತ ಜೇಸಿ ಸಪ್ತಾಹ ‘ವಿಜಯ’-2024: ವಿವಿಧ ಕ್ಷೇತ್ರದ 15 ಸಾಧಕರಿಗೆ ಜೇಸಿ ಪುರಸ್ಕಾರ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ವೈಭವ, ಯಕ್ಷಗಾನ

Suddi Udaya

ನೀರಚಿಲುಮೆ-ನಾರ್ಯ ಸಂಪರ್ಕಿಸುವ ರಸ್ತೆಯಲ್ಲಿ ನೀರು ಹರಿಯಲು ಚರಂಡಿ ವ್ಯವಸ್ಥೆಯಿಲ್ಲದೆ ಧರೆ ಕುಸಿತ, ಶೀಘ್ರ ದುರಸ್ಥಿಗೆ ಆಗ್ರಹ

Suddi Udaya
error: Content is protected !!