ಕೊಯ್ಯೂರು ಸ .ಹಿ ಪ್ರಾ. ಶಾಲೆ ಮತ್ತು ಅರಣ್ಯ ಇಲಾಖೆಯ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

Suddi Udaya

ಕೊಯ್ಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯ್ಯೂರು ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಶಾಲಾ ಆವರಣದಲ್ಲಿ ವನಮಹೋತ್ಸವ ವನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು.


ಈ ಸಂದರ್ಭ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಎಂ., ಉಪವಲಯ ಅರಣ್ಯ ಅಧಿಕಾರಿ ಜೆರಾಲ್ಡ್ ಡಿಸೋಜಾ, ಎಸ್ ಡಿ ಎಂ ಸಿ ಅಧ್ಯಕ್ಷ ವಿನಯ ಕೆ., ಶಾಲಾ ಮುಖ್ಯೋಪಾಧ್ಯಾಯರಾದ ಬಳಿರಾಮ ಲಮಾಣಿ, ಗ್ರಾ ಪಂ ಸದಸ್ಯರಾದ ಯಶವಂತ ಗೌಡ, ಲೋಕೇಶ್ ಗೌಡ ಪಿ, ಇಸುಬು, ಹರೀಶ್ ಗೌಡ, ಹೇಮಾವತಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪಿ ಚಂದ್ರಶೇಖರ್ ಸಾಲ್ಯಾನ್ , ಕೊಯ್ಯೂರು ಬೀಟ್ ಫಾರೆಸ್ಟ್ ಎಂ ಎಂ‌ ಜಗದೀಶ್, ಬಂದಾರು ಬಿಟ್ ಫಾರೆಸ್ಟ್ ಕೆ.ಎನ್ ಜಗದೀಶ್, ಕಣಿಯೂರು ಅರಣ್ಯ ವೀಕ್ಷಕರಾದ ರವಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿ, ವಂದಿಸಿದರು.

Leave a Comment

error: Content is protected !!