ಬಳಂಜ ಶ್ರೀ ಗಣೇಶೋತ್ಸವ ಪೂರ್ವಭಾವಿ ಸಭೆ, ವಿವಿಧ ಸಮಿತಿಗಳ‌ ರಚನೆ

Suddi Udaya

ಬಳಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ-ನಾಲ್ಕೂರು-ತೆಂಕಕಾರಂದೂರು
ಇದರ ವತಿಯಿಂದ ವರ್ಷಂಪ್ರತಿ ನಡೆಯುವ 36 ನೇ ವರ್ಷದ ಗಣೇಶೋತ್ಸವ ಸಮಿತಿಯ ಪೂರ್ವತಯಾರಿ ಸಭೆಯು ಬಳಂಜ ಶಾಲೆಯ ಶಾರದಾ ಕಲಾ ಮಂದಿರದಲ್ಲಿ ಜು. 9 ರಂದು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಹೆಗ್ಡೆ ವಹಿಸಿ ಅತ್ಯಂತ ಅಚ್ಚುಕಟ್ಟಾಗಿ ಈ ಬಾರಿಯ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು ಎಲ್ಲರ ಸಹಕಾರ ಕೋರಿದರು.

35ನೇ ವರ್ಷದ ಯಶಸ್ವಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ತಿಳಿಯಪಡಿಸಿದರು.

ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಕಾಪಿನಡ್ಕ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಪ್ರಧಾನ‌ ಕಾರ್ಯದರ್ಶಿ ಯಶೋಧರ ಶೆಟ್ಟಿ, ಕೋಶಾಧಿಕಾರಿ ಗಣೇಶ್ ದೇವಾಡಿಗ ಸಂಭ್ರಮ, ಪ್ರಮುಖರಾದ ವಿಶ್ವನಾಥ ಹೊಳ್ಳ ಮಜ್ಜೇನಿಬೈಲು, ಬಳಂಜ ಗ್ರಾ.ಪಂ ಅಧ್ಯಕ್ಷ ಹೇಮಂತ್ ಕಟ್ಟೆ, ಶಿವಾಜಿ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಜಗದೀಶ್ ರೈ ಹಾನಿಂಜ, ಗಣೇಶ್ ಪೂಜಾರಿ ಬೊಂಟ್ರೋಟ್ಟು, ರಂಜಿತ್ ಹೆಚ್.ಡಿ ಸುಧಾಮ, ಯೋಗೀಶ್ ಆರ್ ಯೈಕುರಿ,ಸತೀಶ್ ಬರಮೇಲು, ಸದಾನಂದ ಪೂಜಾರಿ ಬೊಂಟ್ರೋಟ್ಟು, ಗುರುಪ್ರಸಾದ್ ಹೆಗ್ಡೆ ದರಿಮಾರ್, ರಜತ್ ಹೆಗ್ಡೆ ಬಳಂಜ, ಪ್ರವೀಣ್ ಪೂಜಾರಿ ಲಾಂತ್ಯಾರು, ಕರುಣಾಕರ ಹೆಗ್ಡೆ ಬೊಕ್ಕಸ, ಪ್ರವೀಣ್ ಕೋಟ್ಯಾನ್ ನಿಟ್ಟಡ್ಕ, ಶರತ್ ಅಂಚನ್ ಬಾಕ್ಯರಡ್ಡ, ಚಂದ್ರಹಾಸ ಬಳಂಜ,ರಂಜಿತ್ ಪೂಜಾರಿ ಮಜಲಡ್ಡ,ಗಣೇಶ್ ಪೂಜಾರಿ, ಸಂತೋಷ್ ಜೈನ್,ನಿತ್ಯಾನಂದ ಹೆಗ್ಡೆ, ಡೀಕಯ್ಯ ಕುಲಾಲ್, ಸಂತೋಷ್ ಭಂಡಾರಿ, ಅನಿಲ್ ಬೊಂಟ್ರೋಟ್ಟು, ಪ್ರವೀಣ್ ಕಟ್ಟೆ, ಅಖಿಲ್ ಬೊಂಟ್ರೊಟ್ಟು, ಪ್ರಕಾಶ್ ಅಟ್ಲಾಜೆ ಮೊದಲಾದವರು ಉಪಸ್ಥಿತರಿದ್ದರು.

Leave a Comment

error: Content is protected !!