25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ ಕಪಿಲಾ ಜೇಸಿಗೆ ವಲಯ ಉಪಾಧ್ಯಕ್ಷರ ಭೇಟಿ

ಕೊಕ್ಕಡ: ಕೊಕ್ಕಡ ಕಪಿಲಾ ಜೇಸಿಗೆ ವಲಯ 15 ಪ್ರಾಂತ್ಯ ಸಿ. ಇದರ ಉಪಾಧ್ಯಕ್ಷರ ಅಧಿಕೃತ
ಭೇಟಿ ಕಾರ್ಯಕ್ರಮ ಜುಲೈ 16 ರಂದು ನಡೆಯಿತು.

ವಲಯ ಉಪಾಧ್ಯಕ್ಷರಾದ ಭರತ್ ಶೆಟ್ಟಿ ಅವರು ಎಲ್. ಎ. ವಿ. ಎಂಬ ತರಬೇತಿ ನೀಡಿದರು.

ಕೊಕ್ಕಡ ಕಪಿಲಾ ಜೇಸಿ ಘಟಕಾಧ್ಯಕ್ಷರಾದ ಜಿತೇಶ್ ಎಲ್ ಪಿರೇರಾ ಅಧ್ಯಕ್ಷತೆ ವಹಿಸಿದ್ದರು.

ಮಹಿಳಾ ಜೇಸಿ ವಿಭಾಗ ಮುಖ್ಯಸ್ಥರಾದ ದೀಪಾ ವಿ. ಜೇಸಿ ವಾಣಿ ವಾಚಿಸಿದರು. ಕೋಶಾಧಿಕಾರಿ ಜಸ್ವಂತ್ ಪಿರೇರಾ ಅವರು ಅತಿಥಿಗಳ ಪರಿಚಯ ಮಾಡಿದರು.

ಇದೇ ವರ್ಷ ಜೆ.ಎಫ್.ಎಂ. ಪುರಸ್ಕಾರ ಗಳಿಸಿದ ಕೆ. ಶ್ರೀಧರ್ ರಾವ್ ಹಾಗೂ ಹೆಚ್. ಜಿ.ಎಫ್. ಫೆಲೋಶಿಪ್ ಪಡೆದ ಜೆಸಿಂತಾ ಡಿ ಸೋಜ ಅವರಿಗೆ ಪಿನ್ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಜೋಯ್ ಬೊತೇಲೊ ಹಾಗೂ ಪ್ರಕಾಶ್ ಬೊತೇಲೊ ಅವರನ್ನು ಜೇಸಿಯ ಪ್ರಮಾಣ ವಚನ ನೀಡಿ ಜೇಸಿ ಅಧಿಕಾರಿಗಳು ಸ್ವಾಗತಿಸಿದರು.

ಜಸ್ವಂತ್, ಶ್ರೀಧರ್ ರಾವ್ ಹಾಗೂ ಜೋಯಿ ಅವರು ತರಬೇತಿ ಕುರಿತು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಜೋಸೆಫ್ ಪಿರೇರಾ ಅವರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಕಾರ್ಯದರ್ಶಿ ವಿಕ್ಟರ್ ಸುವಾರಿಸ್ ವಂದಿಸಿದರು.

Related posts

ಬೆಳ್ತಂಗಡಿ ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ: ಸ್ಪರ್ಧಾತ್ಮಕ ಉದ್ಯೋಗ ಮಾರ್ಗದರ್ಶನ ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟನೆ

Suddi Udaya

ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿದ ಶಿಕ್ಷಕನ ವಿರುದ್ದ ದೂರು ದಾಖಲು

Suddi Udaya

ಬೆಳ್ತಂಗಡಿ ಪೊಲೀಸ್ ಠಾಣೆ ಸಿಬ್ಬಂದಿಯವರಿಗೆ ನೂತನವಾಗಿ ನಿರ್ಮಿಸಿರುವ ವಸತಿಗೃಹ ಲೋಕಾರ್ಪಣೆ; ಗೃಹ ಸಚಿವರಿಗೆ ಅಭಿನಂದನೆ

Suddi Udaya

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ನಿಟ್ಟಡೆ ಕುಂಭಶ್ರೀ ವಿದ್ಯಾಸಂಸ್ಥೆ ಚಾಂಪಿಯನ್

Suddi Udaya

ಉಜಿರೆ: ಶ್ರೀ ಧರ್ಮಸ್ಥಳದ ಮಂಜುನಾಥೇಶ್ವರ ಆಸ್ಪತ್ರೆಗೆ ದಶಮಾನೋತ್ಸವ ಸಂಭ್ರಮ

Suddi Udaya

ಫೆ.13: ವಿದ್ಯುತ್ ನಿಲುಗಡೆ

Suddi Udaya
error: Content is protected !!