September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ ಕಪಿಲಾ ಜೇಸಿಗೆ ವಲಯ ಉಪಾಧ್ಯಕ್ಷರ ಭೇಟಿ

ಕೊಕ್ಕಡ: ಕೊಕ್ಕಡ ಕಪಿಲಾ ಜೇಸಿಗೆ ವಲಯ 15 ಪ್ರಾಂತ್ಯ ಸಿ. ಇದರ ಉಪಾಧ್ಯಕ್ಷರ ಅಧಿಕೃತ
ಭೇಟಿ ಕಾರ್ಯಕ್ರಮ ಜುಲೈ 16 ರಂದು ನಡೆಯಿತು.

ವಲಯ ಉಪಾಧ್ಯಕ್ಷರಾದ ಭರತ್ ಶೆಟ್ಟಿ ಅವರು ಎಲ್. ಎ. ವಿ. ಎಂಬ ತರಬೇತಿ ನೀಡಿದರು.

ಕೊಕ್ಕಡ ಕಪಿಲಾ ಜೇಸಿ ಘಟಕಾಧ್ಯಕ್ಷರಾದ ಜಿತೇಶ್ ಎಲ್ ಪಿರೇರಾ ಅಧ್ಯಕ್ಷತೆ ವಹಿಸಿದ್ದರು.

ಮಹಿಳಾ ಜೇಸಿ ವಿಭಾಗ ಮುಖ್ಯಸ್ಥರಾದ ದೀಪಾ ವಿ. ಜೇಸಿ ವಾಣಿ ವಾಚಿಸಿದರು. ಕೋಶಾಧಿಕಾರಿ ಜಸ್ವಂತ್ ಪಿರೇರಾ ಅವರು ಅತಿಥಿಗಳ ಪರಿಚಯ ಮಾಡಿದರು.

ಇದೇ ವರ್ಷ ಜೆ.ಎಫ್.ಎಂ. ಪುರಸ್ಕಾರ ಗಳಿಸಿದ ಕೆ. ಶ್ರೀಧರ್ ರಾವ್ ಹಾಗೂ ಹೆಚ್. ಜಿ.ಎಫ್. ಫೆಲೋಶಿಪ್ ಪಡೆದ ಜೆಸಿಂತಾ ಡಿ ಸೋಜ ಅವರಿಗೆ ಪಿನ್ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಜೋಯ್ ಬೊತೇಲೊ ಹಾಗೂ ಪ್ರಕಾಶ್ ಬೊತೇಲೊ ಅವರನ್ನು ಜೇಸಿಯ ಪ್ರಮಾಣ ವಚನ ನೀಡಿ ಜೇಸಿ ಅಧಿಕಾರಿಗಳು ಸ್ವಾಗತಿಸಿದರು.

ಜಸ್ವಂತ್, ಶ್ರೀಧರ್ ರಾವ್ ಹಾಗೂ ಜೋಯಿ ಅವರು ತರಬೇತಿ ಕುರಿತು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಜೋಸೆಫ್ ಪಿರೇರಾ ಅವರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಕಾರ್ಯದರ್ಶಿ ವಿಕ್ಟರ್ ಸುವಾರಿಸ್ ವಂದಿಸಿದರು.

Related posts

ಕುದ್ಯಾಡಿ: ಹಿಮರಡ್ಡ ಪ್ರದೇಶದಲ್ಲಿ ಬೃಹತ್‌ ಗಾತ್ರದ ಹೆಬ್ಬಾವು ಪ್ರತ್ಯಕ್ಷ

Suddi Udaya

ಬೆಳ್ತಂಗಡಿ ತಾಲೂಕು ಓಡೀಲು ಭಜನಾ ಸಮಿತಿಯಿಂದ ತುಮಕೂರು ಹಾಗೂ ಶಿರಾ ತಾಲೂಕಿನಲ್ಲಿ ಶ್ರೀ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಅದ್ಭುತ ಕುಣಿತ ಭಜನಾ ಸೇವೆ

Suddi Udaya

ಹುಣ್ಸೆಕಟ್ಟೆ ಪಲ್ಕೆ ನಿವಾಸಿ ನಾರಾಯಣ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೆಳ್ತಂಗಡಿ ಪ.ಪಂ. ಆಡಳಿತ ಅಧಿಕಾರಿಯಾಗಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅಧಿಕಾರ ಸ್ವೀಕಾರ

Suddi Udaya

ಇಲಾಖಾ ಅಧಿಕಾರಿಗಳು ಗೈರು, ಕೊಕ್ಕಡ ಗ್ರಾಮ ಸಭೆ ಮುಂದೂಡಿಕೆ

Suddi Udaya

ಬೆಳ್ತಂಗಡಿಯಲ್ಲಿ ರೂ.56 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೂರು ಸೇತುವೆ: ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಇಂಜಿನಿಯರ್ ಹಾಗೂ ಮುಖ್ಯ ಗುತ್ತಿಗೆದಾರ, ಮತ್ತು ಇಂಜಿನಿಯರ್ ತಂಡ ಭೇಟಿ

Suddi Udaya
error: Content is protected !!