ಜು.25: ಹಾಲು ಹೆಚ್ಚಳ ಮತ್ತು ಹೈನುಗಾರಿಕಾ ಮಾಹಿತಿ ಕಾರ್ಯಕ್ರಮ

Suddi Udaya

ಶಿರ್ಲಾಲು : ದ.ಕ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಹಾಗೂ ಶಿರ್ಲಾಲು ಹಾಲು ಉತ್ಪಾದಕರ ಸಹಕಾರಿ ಸಂಘ ಶಿರ್ಲಾಲು ಇವರ ಸಹಭಾಗಿತ್ವದಲ್ಲಿ ಹಾಲು ಹೆಚ್ಚಳ ಮತ್ತು ಹೈನುಗಾರಿಕಾ ಮಾಹಿತಿ ಕಾರ್ಯಕ್ರಮವು ಜು.25 ರಂದು ಪೂರ್ವಾಹ್ನ ಗಂಟೆ 10.00 ರಿಂದ ಸುಲ್ಕೇರಿಮೊಗ್ರು ಸಿ.ಎ ಬ್ಯಾಂಕ್ ನ ನವೋದಯ ಸಭಾಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮಂಗಳೂರು ದ.ಕ.ಜಿ.ಸ.ಹಾ.ಉ.ಒ.ನಿ ನಿರ್ದೇಶಕ ಬಿ. ನಿರಂಜನ್ ಉದ್ಘಾಟಿಸಲಿದ್ದಾರೆ.

ಅಧ್ಯಕ್ಷತೆಯನ್ನು ಶಿರ್ಲಾಲು ಹಾ.ಉ.ಸ.ಸಂ.ನಿ ಅಧ್ಯಕ್ಷ ಮಾಧವ ವಹಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ದ.ಕ.ಜಿ.ಸ.ಹಾ.ಉ.ಒ.ನಿ. ನಿವೃತ್ತ ಪ್ರದಾನ ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ ಭಾಗವಹಿಸಲಿರುವರು.

ಮುಖ್ಯ ಅತಿಥಿಗಳಾಗಿ ಮಂಗಳೂರು ದ.ಕ.ಜಿ.ಸ.ಹಾ.ಉ.ಒ.ನಿ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ, ಮಂಗಳೂರು ದ.ಕ.ಜಿ.ಸ.ಹಾ.ಉ.ಒ.ನಿ. ಸಹಾಯಕ ವ್ಯವಸ್ಥಾಪಕರು ಡಾ| ಪೂಜಾ, ಮಂಗಳೂರು ದ.ಕ.ಜಿ.ಸ.ಹಾ.ಉ.ಒ.ನಿ. ವಿಸ್ತರಣಾಧಿಕಾರಿ ಶ್ರೀಮತಿ ಸುಚಿತ್ರಾ, ಶಿರ್ಲಾಲು ಗ್ರಾ.ಪಂ. ಅಧ್ಯಕ್ಷ ತಾರಾನಾಥ ಗೌಡ, ಶಿರ್ಲಾಲು ಸಿ.ಎ ಬ್ಯಾಂಕ್ ಅಧ್ಯಕ್ಷ ನವೀನ್ ಕೆ ಸಾಮಾನಿ ಭಾಗವಹಿಸಲಿದ್ದಾರೆ.

Leave a Comment

error: Content is protected !!