ಸವಣಾಲು ಅ. ಹಿ. ಪ್ರಾ. ಶಾಲೆಯ ನಡ್ತಿಕಲ್ಲುವಿನಲ್ಲಿ ಹಣ್ಣಿನ ಗಿಡನಾಟಿ

Suddi Udaya

ಬೆಳ್ತಂಗಡಿ ವಲಯ ಸವಣಾಲು ಕಾರ್ಯಕ್ಷೇತ್ರದ ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಡ್ತಿಕಲ್ಲು
ಹಣ್ಣಿನ ಗಿಡನಾಟಿ ಕಾರ್ಯಕ್ರಮವನ್ನು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಬಂಧು ಒಕ್ಕೂಟ ಸವಣಾಲು, ಎ.ಬಿ ಶಾಲಾಭಿವೃದ್ಧಿ ಸಮಿತಿ , ಸವಣಾಲು, ಶ್ರೀಕೃಷ್ಣ ಭಜನಾ ಮಂಡಳಿ ಶಾಲಾ ಶಿಕ್ಷಕ ವೃಂದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಜು.24 ರಂದು ನಡೆಸಲಾಯಿತು.


ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಕೃಷ್ಣಪ್ಪ ಎಂ.ಕೆ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗಣೇಶ್ ಭಂಡಾರಿ, ಆಡಳಿತ ಮಂಡಳಿ ಸಂಚಾಲಕರು ಕಿರಣ್ ಗೌಡ, ಆಡಳಿತ ಮಂಡಳಿಯ ಸದ್ಯರಾದ ದಯಾನಂದ ಗೌಡ, ತಾಯಂದಿರ ಅಧ್ಯಕ್ಷರಾದ ಪ್ರೇಮ ಮತ್ತು ಪೋಷಕರು, ಬೆಳ್ತಂಗಡಿ ವಲಯ ಮೇಲ್ವಿಚಾರಕರಾದ ಹರೀಶ್ ಗೌಡ, ಆಂತರಿಕ ಲೆಕ್ಕ ಪರಿಶೋಧಕರಾದ ಶಿವರಾಮ ಹಾಗೂ ಸೇವಾಪ್ರತಿನಿಧಿಗಳಾದ ಸುಮಲತಾ ಮತ್ತು ಯೋಗೀಶ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಮಂಜುನಾಥ ಹಾಗೂ ಜ್ಞಾನದೀಪ ಶಿಕ್ಷಕಿ ಶುಭ, ಶಾಲಾ ಶಿಕ್ಷಕರು, ಪ್ರಗತಿ ಬಂಧು ಒಕ್ಕೂಟದ ಪದಾಧಿಕಾರಿಗಳು ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.

Leave a Comment

error: Content is protected !!