ಲಾಯಿಲ: ಕನ್ನಾಜೆ ಅಂಗನವಾಡಿ ಕೇಂದ್ರದಲ್ಲಿ ಹಣ್ಣಿನ ಗಿಡಗಳ ನಾಟಿ ಹಾಗೂ ಶಾಲಾ ಕೈತೋಟ ರಚನೆ

Suddi Udaya

ಲಾಯಿಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಬೆಳ್ತಂಗಡಿ ವಲಯದ ಕನ್ನಾಜೆ ಕಾರ್ಯಕ್ಷೇತ್ರದ, ಕನ್ನಾಜೆ ಒಕ್ಕೂಟ , ಅಂಗನವಾಡಿ ಕೇಂದ್ರ ಕನ್ನಾಜೆ ಇವರ ಸಹಕಾರದೊಂದಿಗೆ ಅಂಗನವಾಡಿ ಕೇಂದ್ರ ಕನ್ನಾಜೆಯಲ್ಲಿ ಹಣ್ಣಿನ ಗಿಡಗಳ ನಾಟಿ ಹಾಗೂ ಶಾಲಾ ಕೈತೋಟ ಮಾಡಲಾಯಿತು.

ಈ ಸಂದರ್ಭ ಬೆಳ್ತಂಗಡಿ ವಲಯದ ಭಜನಾ ಪರಿಷತ್ ಸಂಯೋಜಕರಾದ ಗಣೇಶ್ ಕನ್ನಾಜೆ, ಶ್ರೀದುರ್ಗಾ ಭಜನಾ ಮಂಡಳಿಯ ಅಧ್ಯಕ್ಷರಾದ ನಾಗೇಶ್ ಬೆಳ್ತಂಗಡಿ, ವಲಯದ ಮೇಲ್ವಿಚಾರಕರಾದ ಹರೀಶ್ ಗೌಡ, ಅಂಗನವಾಡಿ ಶಿಕ್ಷಕರಾದ ಶ್ರೀಮತಿ ರತ್ನ,ಸಹಾಯಕಿ ಶ್ರೀಮತಿ ಸಾವಿತ್ರಿ, ಕನ್ನಾಜೆ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀಮತಿ ದಿವ್ಯ, ಕೋಶಾಧಿಕಾರಿಯಾದ ಶ್ರೀಮತಿ ವಿಶಾಲಾಕ್ಷಿ ಸೇವಾ-ಪ್ರತಿನಿಧಿ ಶ್ರೀಮತಿ ಜ್ಯೋತಿ ಮತ್ತು ಕನ್ನಾಜೆ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದು ಹಣ್ಣಿನ ಗಿಡಗಳ ನಾಟಿ ಹಾಗೂ ಶಾಲ ಕೈತೋಟ ರಚನೆ ಮಾಡಲಾಯಿತು.

Leave a Comment

error: Content is protected !!