April 2, 2025
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 73ರ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ ಕಿ.ಮೀ 40ರಿಂದ 75ರವರೆಗಿನ ರಸ್ತೆಯನ್ನು ಅಗಲೀಕರಣಗೊಳಿಸುವ ನಿಟ್ಟಿನಲ್ಲಿ 26.57295 ಹೆಕ್ಟೇರ್ ಜಾಗವನ್ನು ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕ ಪ್ರಕಟಣೆ ಹೊರಬಿದ್ದಿದೆ.

ರಸ್ತೆಗೆ ಭೂ ಸ್ವಾಧೀನವಾಗಲಿರುವ ಜಾಗದ ಭೂಮಾಲಕರು ಅಥವಾ ಯಾವುದೇ ರೀತಿಯ ಹಿತಾಸಕ್ತಿ ಉಳ್ಳವರು 21 ದಿನಗಳ ಒಳಗಾಗಿ ಆಕ್ಷೇಪಣೆಗಳನ್ನು ಭೂಸ್ವಾಧೀನ ಅಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಕುಕ್ಕುಳ ಗ್ರಾಮದಲ್ಲಿ ಒಟ್ಟು 35 ಸರ್ವೆ ನಂಬ್ರಗಳು, ಪಾರೆಂಕಿ ಗ್ರಾಮದಲ್ಲಿ ಒಟ್ಟು 20 ಸರ್ವೆನಂಬ್ರಗಳು, ಮಾಲಾಡಿ ಗ್ರಾಮದಲ್ಲಿ ಒಟ್ಟು 35 ಸರ್ವೆನಂಬ್ರಗಳು, ಸೋಣಂದೂರು ಗ್ರಾಮದಲ್ಲಿ ಒಟ್ಟು 61 ಸರ್ವೆ ನಂಬ್ರಗಳು, ಕುವೆಟ್ಟು ಗ್ರಾಮದಲ್ಲಿ ಒಟ್ಟು 78 ಸರ್ವೆ ನಂಬ್ರಗಳು, ಬೆಳ್ತಂಗಡಿ ಕಸಬಾದಲ್ಲಿ ಒಟ್ಟು 144 ಸರ್ವೆನಂಬ್ರಗಳು, ಲಾಯಿಲ ಗ್ರಾಮದಲ್ಲಿ ಒಟ್ಟು 93 ಸರ್ವೆ ನಂಬ್ರಗಳು, ಉಜಿರೆ ಗ್ರಾಮದಲ್ಲಿ ಒಟ್ಟು 68 ಸರ್ವೆನಂಬ್ರಗಳು, ಕಲ್ಮಂಜ ಗ್ರಾಮದಲ್ಲಿ ಒಟ್ಟು20 ಸರ್ವೆ ನಂಬ್ರಗಳು, ಮುಂಡಾಜೆ ಗ್ರಾಮದಲ್ಲಿ ಒಟ್ಟು 61 ಸರ್ವೆ ನಂಬ್ರಗಳು, ಚಿಬಿದ್ರೆ ಗ್ರಾಮದಲ್ಲಿ ಒಟ್ಟು 41 ಸರ್ವೆ ನಂಬ್ರಗಳು, ಚಾರ್ಮಾಡಿಯಲ್ಲಿ ಒಟ್ಟು 88 ಸರ್ವೆ ನಂಬ್ರಗಳು ಈ ಸರ್ವೆ ನಂಬ್ರಗಳಲ್ಲಿ ರಸ್ತೆ ಹಾದು ಹೋಗುತ್ತಿದ್ದು, ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿದೆ. ಇದಕ್ಕಾಗಿ ಭೂ ಸ್ವಾಧೀನ ನಡೆಯಲಿದೆ.

Related posts

ಫೆ.28: ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರತ್ನಾವತಿ ಪಿ ಸೇವಾ ನಿವೃತ್ತಿ

Suddi Udaya

ನಿಡ್ಲೆ: ಇನೋವಾ ಕಾರು ಹಾಗೂ ಪೊಲೀಸ್ ವ್ಯಾನ್ ನಡುವೆ ಡಿಕ್ಕಿ

Suddi Udaya

ಹರೀಶ್ ಎನ್. ನಾಳ ಹೃದಯಾಘಾತದಿಂದ ನಿಧನ

Suddi Udaya

ಸಿನಿಮಾ ರಂಗದ ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿರುವ ಬಾರ್ಯದ ಕಲ್ಲಾಜೆಯ ನಿವಾಸಿ ಯುವ ಸಂಗೀತ ನಿರ್ದೇಶಕ ಪ್ರಸಾದ್ ಕೆ ಶೆಟ್ಟಿ

Suddi Udaya

ಪ್ರಸನ್ನ ಆಂ.ಮಾ. ವಸತಿ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

Suddi Udaya

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸಹೋದರ, ಸಹೋದರಿಯರಿಗೆ ರಾಖಿಯನ್ನು ಕಟ್ಟುವ ಮುಖೇನ ರಕ್ಷಾ ಬಂಧನ ಹಬ್ಬ ಆಚರಣೆ

Suddi Udaya
error: Content is protected !!