37.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 73ರ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ ಕಿ.ಮೀ 40ರಿಂದ 75ರವರೆಗಿನ ರಸ್ತೆಯನ್ನು ಅಗಲೀಕರಣಗೊಳಿಸುವ ನಿಟ್ಟಿನಲ್ಲಿ 26.57295 ಹೆಕ್ಟೇರ್ ಜಾಗವನ್ನು ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕ ಪ್ರಕಟಣೆ ಹೊರಬಿದ್ದಿದೆ.

ರಸ್ತೆಗೆ ಭೂ ಸ್ವಾಧೀನವಾಗಲಿರುವ ಜಾಗದ ಭೂಮಾಲಕರು ಅಥವಾ ಯಾವುದೇ ರೀತಿಯ ಹಿತಾಸಕ್ತಿ ಉಳ್ಳವರು 21 ದಿನಗಳ ಒಳಗಾಗಿ ಆಕ್ಷೇಪಣೆಗಳನ್ನು ಭೂಸ್ವಾಧೀನ ಅಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಕುಕ್ಕುಳ ಗ್ರಾಮದಲ್ಲಿ ಒಟ್ಟು 35 ಸರ್ವೆ ನಂಬ್ರಗಳು, ಪಾರೆಂಕಿ ಗ್ರಾಮದಲ್ಲಿ ಒಟ್ಟು 20 ಸರ್ವೆನಂಬ್ರಗಳು, ಮಾಲಾಡಿ ಗ್ರಾಮದಲ್ಲಿ ಒಟ್ಟು 35 ಸರ್ವೆನಂಬ್ರಗಳು, ಸೋಣಂದೂರು ಗ್ರಾಮದಲ್ಲಿ ಒಟ್ಟು 61 ಸರ್ವೆ ನಂಬ್ರಗಳು, ಕುವೆಟ್ಟು ಗ್ರಾಮದಲ್ಲಿ ಒಟ್ಟು 78 ಸರ್ವೆ ನಂಬ್ರಗಳು, ಬೆಳ್ತಂಗಡಿ ಕಸಬಾದಲ್ಲಿ ಒಟ್ಟು 144 ಸರ್ವೆನಂಬ್ರಗಳು, ಲಾಯಿಲ ಗ್ರಾಮದಲ್ಲಿ ಒಟ್ಟು 93 ಸರ್ವೆ ನಂಬ್ರಗಳು, ಉಜಿರೆ ಗ್ರಾಮದಲ್ಲಿ ಒಟ್ಟು 68 ಸರ್ವೆನಂಬ್ರಗಳು, ಕಲ್ಮಂಜ ಗ್ರಾಮದಲ್ಲಿ ಒಟ್ಟು20 ಸರ್ವೆ ನಂಬ್ರಗಳು, ಮುಂಡಾಜೆ ಗ್ರಾಮದಲ್ಲಿ ಒಟ್ಟು 61 ಸರ್ವೆ ನಂಬ್ರಗಳು, ಚಿಬಿದ್ರೆ ಗ್ರಾಮದಲ್ಲಿ ಒಟ್ಟು 41 ಸರ್ವೆ ನಂಬ್ರಗಳು, ಚಾರ್ಮಾಡಿಯಲ್ಲಿ ಒಟ್ಟು 88 ಸರ್ವೆ ನಂಬ್ರಗಳು ಈ ಸರ್ವೆ ನಂಬ್ರಗಳಲ್ಲಿ ರಸ್ತೆ ಹಾದು ಹೋಗುತ್ತಿದ್ದು, ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿದೆ. ಇದಕ್ಕಾಗಿ ಭೂ ಸ್ವಾಧೀನ ನಡೆಯಲಿದೆ.

Related posts

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ: ಶ್ರೀಉಮಾಮಹೇಶ್ವರ ದೇವರಿಗೆ ಪಂಚಾಮೃತ ಅಭಿಷೇಕ: ಬ್ರಹ್ಮಕಲಶಾಭಿಷೇಕ

Suddi Udaya

ಧರ್ಮಸ್ಥಳ ಗ್ರಾ.ಪಂ. ಸ್ವಚ್ಛತೆಯೇ ಸೇವೆ ಕಾರ್ಯಕ್ರಮದಲ್ಲಿ ಸ್ವಚ್ಛತಾ ನೌಕರರ ಕುಟುಂಬದ ಆರೋಗ್ಯ ತಪಾಸಣೆ, ಸನ್ಮಾನ ಹಾಗೂ ವಸ್ತ್ರ ವಿತರಣೆ

Suddi Udaya

ಬಂಗಾಡಿ ಫ್ರೆಂಡ್ಸ್ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಲಯ ಮಟ್ಟದ ಪುರುಷರ ಹಗ್ಗ ಜಗ್ಗಾಟ:

Suddi Udaya

ಉಜಿರೆ: ಆಲ್ವಿನ್ ಮೆಂಡೋನ್ಸಾ ನಿಧನ

Suddi Udaya

ನಾರಾವಿ ವೈಶಾಲಿ ಪರಿಸರದಲ್ಲಿ ಮನೆ ಹಾಗೂ ತೋಟಕ್ಕೆ ಸಿಡಿಲು ಬಡಿತ: ಸಿಡಿಲಿನ ರಭಸಕ್ಕೆ ಸುಟ್ಟು ಕರಕಲಾದ ಮನೆಯ ವಸ್ತುಗಳು, ಅಪಾಯದಿಂದ ಪಾರಾದ ತಾಯಿ- ಮಗಳು

Suddi Udaya

ಕಲ್ಮಂಜ: ನಿಡಿಗಲ್ ನಿವಾಸಿ ಶರೀಫ್ ಚಮ್ಮು ನಿಧನ

Suddi Udaya
error: Content is protected !!