ಬೆಳ್ತಂಗಡಿ: ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ರವರಿಗೆ ಕಾಂಗ್ರೆಸ್ ನಿಂದ ಭವ್ಯ ಸ್ವಾಗತ

Suddi Udaya

ಬೆಳ್ತಂಗಡಿ : ಕರ್ನಾಟಕ ವಿಧಾನಸಭಾದ ಸಭಾಧ್ಯಕ್ಷರಾಗಿರುವ, ಶಾಸಕ ಯು ಟಿ ಖಾದರ್ ಗೆ ಬೆಳ್ತಂಗಡಿ ಕಾಂಗ್ರೆಸ್ ನಿಂದ ಭವ್ಯ ಸ್ವಾಗತ ಕೋರಲಾಯಿತು.

ಧರ್ಮಸ್ಥಳದ ಕಾರ್ಯಕ್ರಮಕ್ಕೆ ತೆರಳುವ ಖಾದರ್ ರವರನ್ನು ಸಂತೆಕಟ್ಟೆಯ ಅಯ್ಯಪ್ಪ ಮಂದಿರದ ಬಳಿ ಕಾಂಗ್ರೆಸ್ ನಾಯಕರು ಸ್ವಾಗತಿಸಿ ಅಭಿನಂದಿಸಿದರು.


ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಕಾಂಗ್ರೆಸ್ ನಾಯಕರುಗಳಾದ ಧರಣೇಂದ್ರ ಕುಮಾರ್, ಯು ಕೆ ಹನೀಫ್, ಹಸನಬ್ಬ ಚಾರ್ಮಾಡಿ, ಪ್ರವೀಣ್ ಫೆರ್ನಾಂಡೀಸ್. ರಮಾನಂದ ಸಾಲಿಯಾನ್, ಧನಂಜಯ್ ರಾವ್, ತ್ರಿವಿಕ್ರಮ್, ಸಿರಾಜ್, ತನುಷ್ ಶೆಟ್ಟಿ, ತೇಜಸ್, ರಾಜೇಶ್ ಸವಣಾಲ್, ಯತೀಶ್, ಯಕ್ಷ, ನವೀನ್ ಗೌಡ, ಅಯಾಜ್, ರಜತ್, ಯಶೋಧರ್ ಚಾರ್ಮಾಡಿ, ಮನೋಹರ್ ಇಳಂತಿಲ ಮುಂತಾದವರು ಉಪಸ್ಥಿತರಿದ್ದರು.

Leave a Comment

error: Content is protected !!