ಶಿಬಾಜೆ: ಕಾಡಾನೆ ದಾಳಿಗೆ ಹಸು ಬಲಿ

Suddi Udaya

ಶಿಬಾಜೆ ಗ್ರಾಮದ ಉಲಹನ್ನನ್ ಟಿಎ ಅವರ ಮನೆಯ ತೋಟದಲ್ಲಿ ಮೇಯಲು ಕಟ್ಟಿದ ಹಸುವನ್ನು ಕಾಡಾನೆ ದಾಳಿ ನಡೆಸಿ ಕೊಂದ ಘಟನೆ ಜು.27 ರಂದು ಸಂಜೆ ವರದಿಯಾಗಿದೆ.

ತೋಟಕ್ಕೆ ನುಗ್ಗಿ ಬಾಳೆಗಿಡಗಳನ್ನು ಹಾನಿ ಮಾಡಿದ ಕಾಡಾನೆಯನ್ನು ಓಡಿಸುವ ಸಂದರ್ಭದಲ್ಲಿ ಅಲ್ಲೆ ಪಕ್ಕದಲ್ಲಿ ಮೇಯಲು ಕಟ್ಟಿದ ಹಸುವನ್ನು ಎತ್ತಿ ಬೀಸಾಕಿ ಓಡಿದ್ದು, ಬೀಸಕಿದ ರಭಸಕ್ಕೆ ಹಸುವು ಸಾವನ್ನಪ್ಪಿದೆ.

ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ವಲಯಾರಣ್ಯಧಿಕಾರಿ ಆಗಮಿಸಿ ಸ್ಥಳ ಪರೀಕ್ಷಿಸಿ ಸರಕಾರದ ವತಿಯಿಂದ ದೊರಕಲಿರುವ ಅನುದಾನ ತೆಗೆಸಿಕೊಡುವುದಾಗಿ ಭರವಸೆ ನೀಡಿದರು.

Leave a Comment

error: Content is protected !!