24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ನಡ ಆಯುಷ್ಮಾನ್ ಆರೋಗ್ಯ ಸೇವಾ ಕೇಂದ್ರಕ್ಕೆ ಚಯರ್ ಕೊಡುಗೆ

ನಡ: ನಡ ಆಯುಷ್ಮಾನ್ ಆರೋಗ್ಯ ಸೇವಾ ಕೇಂದ್ರದ ಸೇವಕಿ ಲೀನಾ ಹಾಗೂ ಆರೋಗ್ಯ ಸಹಾಯಕಿ ಸಾವಿತ್ರಿ ಇವರು ತಮ್ಮ ಸೇವಾ ಕೇಂದ್ರಕ್ಕೆ, ಆಗಮಿಸುವ ಜನರಿಗೆ ಕುಳಿತು ಕೊಳ್ಳಲು ಆಸನದ (ಕುರ್ಚಿ ) ಬೇಡಿಕೆಯನ್ನು ನಡ ಗ್ರಾಮ ಪಂಚಾಯತ್ ಗೆ ನೀಡಿದಾಗ, ಪಂಚಾಯತ್ ವತಿಯಿಂದ, ಸ್ನೇಹ ಸೇವಾ ಟ್ರಸ್ಟ್ ಉಜಿರೆ ಸುರೇಶ್ ಹೆಬ್ಬಾರ್ ಹಾಗೂ ಗಜಾನನ ಗೋಗಟೆ, ಇವರಲ್ಲಿ ಸಹಾಯಹಸ್ತ ಕೇಳಿದಾಗ ಕೂಡಲೇ ಸ್ಪಂದಿಸಿದ ಅವರು ಕುರ್ಚಿಯನ್ನು ದೇಣಿಗೆ ನೀಡಿರುತ್ತಾರೆ.

ಈ ಮೊದಲು ನಮ್ಮ ನಡ ಕನ್ಯಾಡಿ ಗ್ರಾಮದ 8 ಅಂಗನವಾಡಿ ಶಾಲೆಗಳಿಗೆ ಫಿಲ್ಟರ್ ನೀಡಿರುತ್ತಾರೆ. ಅದಲ್ಲದೆ ನಡ ಕನ್ಯಾಡಿ ಗ್ರಾಮಗಳ 5 ಸರಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಿಗೆ ಪುಸ್ತಕ ವಿತರಣೆ ಒದಗಿಸಿರುತ್ತಾರೆ.

ಈ ಸಂದರ್ಭದಲ್ಲಿ ನಡ ಗ್ರಾ.ಪಂ. ಅಧ್ಯಕ್ಷ ವಿಜಯ ಗೌಡ, ಉಜಿರೆ ಸ್ನೇಹ ಸೇವಾ ಟ್ರಸ್ಟ್ ನ ಸುರೇಶ್ ಹೆಬ್ಬಾರ್ ಹಾಗೂ ಗಜಾನನ ಗೋಗಟೆ, ಆಯುಷ್ಮಾನ್ ಆರೋಗ್ಯ ಸೇವಾ ಕೇಂದ್ರದ ಲೀನಾ, ಸಾವಿತ್ರಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Related posts

ಅಪಘಾತದಲ್ಲಿ ಗಂಭೀರ ಗಾಯಗೊಂಡ ಉಜಿರೆಯ ಸುರೇಂದ್ರ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಿಂದ ದಿ. ಪಿ. ವೆಂಕಟರಮಣ ರವರಿಗೆ ನುಡಿನಮನ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಪೋಷಕರ ಸಮಾವೇಶ ಮತ್ತು ಭಿತ್ತಿಪತ್ರಗಳ ಅನಾವರಣ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಭೇಟಿ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ವತ್ ಸನ್ಮಾನ ಕಾರ್ಯಕ್ರಮ

Suddi Udaya

ಕುತ್ಲೂರು ಅಂಗನವಾಡಿ ಕೇಂದ್ರಕ್ಕೆ ಟಿ.ವಿ. ಮತ್ತು ಇಂಟರ್ನೆಟ್ ಕೊಡುಗೆ

Suddi Udaya
error: Content is protected !!