ಬೆಳ್ತಂಗಡಿ ತಾ.ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ: ಅಧ್ಯಕ್ಷರಾಗಿ ಹರೀಶ್ ಕಾರಿಂಜ, ಕಾರ್ಯದರ್ಶಿಯಾಗಿ ಯತೀಶ್ ಸಿರಿಮಜಲು ಪುನರಾಯ್ಕೆ

Suddi Udaya

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ 2023-24ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಹರೀಶ್ ಕಾರಿಂಜ ಹಾಗೂ ಕಾರ್ಯದರ್ಶಿಯಾಗಿ ಯತೀಶ್ ಸಿರಿಮಜಲು ಪುನರಾಯ್ಕೆ ಆಗಿದ್ದಾರೆ.

ಜು. 30ರಂದು ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ಜರಗಿದ ಸಂಘದ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಡೆಯಿತು.
ಹಾಗೆಯೇ ನೂತನ 24 ಮಂದಿಯ ಸಮಿತಿ ಸದಸ್ಯರ ಆಯ್ಕೆ ನಡೆದು ಹೊಸ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಉಪಾಧ್ಯಕ್ಷರು ಹೆಚ್ ಪದ್ಮಕುಮಾರ್ ಬೆಳ್ತಂಗಡಿ, ಜೊತೆ ಕಾರ್ಯದರ್ಶಿ ದಿನೇಶ್ ಮೂಲ್ಯ ಮಾಲಾಡಿ, ಕೋಶಾಧಿಕಾರಿ ಶ್ರೀಮತಿ ಲಲಿತಾ ಎ ಕುಲಾಲ್ ಕಕ್ಕಿಂಜೆ, ಸಂಘಟನಾ ಕಾರ್ಯದರ್ಶಿ ಲೋಕೇಶ್ ಕುಲಾಲ್ ಕಂಚಿಂಜ ಆಯ್ಕೆ ಆದರು.

ಸಮಿತಿಯ ಸದಸ್ಯರುಗಳಾಗಿ ಸಾಂತಪ್ಪ ಮೂಲ್ಯ ಕಳಿಕ, ಹರೀಶ್ ಮೂಲ್ಯ ನಾರಾವಿ, ಉಮೇಶ್ ಕುಲಾಲ್ ಮಾಕೆರೆಕೆರೆ , ಹರಿಶ್ಚಂದ್ರ ಮೂಲ್ಯ ಪಾಂಡೇಶ್ವರ, ಮೋಹನ್ ಬಂಗೇರ ಕಾರಿಂಜ , ಸೋಮಯ ಮೂಲ್ಯ ಹನೈನಡೆ , ಜಗನ್ನಾಥ್ ಕುಲಾಲ್ ಸಿರಿಮಜಲ್, ದಯಾನಂದ ಮೂಲ್ಯ ಅಂಡಿಂಜೆ, ತಿಲಕ್ ರಾಜ್ ಕುಲಾಲ್ ಕೋಡಿ ಬೈಲು, ಗಣೇಶ್ ಕುಲಾಲ್ ಕೊಂಟುಪಲ್ಕೆ , ಕೃಷ್ಣಪ್ಪ ಕುಲಾಲ್ ಕಾಶಿಬೆಟ್ಟು , ಶ್ರೀಮತಿ ವಸಂತಿ ಬಳ್ಳಮಂಜ, ಕವನ್ ಕುಲಾಲ್ ಕೊಜಪ್ಪಾಡಿ , ಮೋಹನ್ ಕೆ ಕಂಚಿಂಜ, ಗಣೇಶ್ ಮೂಲ್ಯ ಅನಿಲಡೆ, ಸಂಜೀವ ಕುಲಾಲ್ ಎನ್ ಸಂಜಯ್ ನಗರ , ನಾಣ್ಯಪ್ಪ ಮೂಲ್ಯ ಮಚ್ಚಿನ, ಪ್ರವೀಣ್ ಕುಲಾಲ್ ಬರಾಯ ಆಯ್ಕೆಯಾದರು.

Leave a Comment

error: Content is protected !!