ಕಳಿಯ ಗ್ರಾ.ಪಂ. ಅಧ್ಯಕ್ಷೆ ಸುಭಾಷಿಣಿ ಕೆ.ಗೌಡ ಹಾಗೂ ಉಪಾಧ್ಯಕ್ಷೆ ಕುಸುಮ ಎನ್.ಬಂಗೇರ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಗೇರುಕಟ್ಟೆ : ಕಳಿಯ ಗ್ರಾಮ ಪಂಚಾಯತು ಅಧ್ಯಕ್ಷೆ ಸುಭಾಷಿಣಿ ಕೆ.ಗೌಡ ಹಾಗೂ ಉಪಾಧ್ಯಕ್ಷೆ ಕುಸುಮ ಎನ್.ಬಂಗೇರ ರವರಿಗೆ ಪಂಚಾಯತು ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗದ ನೇತೃತ್ವದಲ್ಲಿ ಅಭಿನಂದನಾ ಕಾರ್ಯಕ್ರಮ ಆ.3. ರಂದು ಕಳಿಯ ಪಂಚಾಯತು ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಪಂಚಾಯತು ಸದಸ್ಯರಾದ ದಿವಾಕರ ಮೆದಿನ, ಸುಧಾಕರ ಮಜಲು, ವಿಜಯ ಕುಮಾರ್ ಕಲಾಯಿತೊಟ್ಟು, ಅಬ್ದುಲ್ ಕರೀಂ ಕೆ.ಎಮ್.ಗೇರುಕಟ್ಟೆ, ಯಶೋಧರ ಶೆಟ್ಟಿ ಕೊರಂಜ, ಹರೀಶ್ ಕುಮಾರ್ ಬಿ.ಬೆರ್ಕೆತೊಡಿ, ಲತೀಫ್ ಪರೀಮ್, ಮರೀಟಾ ಪಿಂಟೊ, ಮೋಹಿನಿ ಹಾಕೋಟೆ, ಪುಷ್ಪ ನಾಳ, ಶ್ವೇತಾ ಶ್ರೀನಿವಾಸ್ ಬೆರ್ಕೆತ್ತೋಡಿ, ಶಕುಂತಲಾ ಕುಳಾಯಿ, ಇಂದಿರಾ ಶೆಟ್ಟಿ ಭಂಡಾರಿಕೋಡಿ ಉಪಸ್ಥಿತರಿದ್ದರು.

ಸಿಬ್ಬಂದಿಗಳಾದ ಸುಚಿತ್ರಾ, ರವಿ ಹೆಚ್, ಸುರೇಶ್ ಕುಮಾರ್, ಶಶಿಕಲಾ, ನಂದಿನಿ, ಮಾನಸ, ಪ್ರಜ್ಞಾ ಭಾಗವಹಿಸಿದರು.

Leave a Comment

error: Content is protected !!