July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಮಚ್ಚಿನ ಸ. ಪ್ರೌ.ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಯೋಗಿಶ್. ಎಸ್ ರವರಿಗೆ ಬೀಳ್ಕೊಡುಗೆ

ಮಚ್ಚಿನ : “ತನ್ನ ನೋಡಲಿ ಎಂದು ಕನ್ನಡಿ ತಾ ಕರೆಯುವುದೇ, ತನ್ನಲ್ಲಿ ಜ್ಞಾನ ಉದಿಸಿದ ಮಹಾತ್ಮನು ಜಗಕೆ ಕನ್ನಡಿಯು ಸರ್ವಜ್ಞ.” ಒಂದು ಯೋಜನಾ ಬದ್ಧ ಗುರಿ ,ದೃಢ ನಿರ್ಧಾರ, ನಿಸ್ವಾರ್ಥ ಸೇವಾ ಮನೋಭಾವನೆ ,ತಂತ್ರಜ್ಞಾನ ಅಳವಡಿಸಿ ವಿದ್ಯಾರ್ಥಿ ಸ್ನೇಹಿ ಶಿಕ್ಷಣವನ್ನು ನೀಡುವ ಗುರಿಯನ್ನಿಟ್ಟುಕೊಂಡ ಆದರ್ಶ ಶಿಕ್ಷಕರು ಯೋಗಿಶ .ಎಸ್ ಈ ಹಿಂದೆ ಮುದ್ದೇನಹಳ್ಳಿಯ ಸತ್ಯ ಸಾಯಿ ಶಿಕ್ಷಣ ಸಂಸ್ಥೆ ಹಾಗೂ ಚಿಕ್ಕಬಳ್ಳಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದು , ಸರಕಾರಿ ಪ್ರೌಢಶಾಲೆ ಮಚ್ಚಿನ ಇಲ್ಲಿಗೆ ಸಮಾಜ ವಿಜ್ಞಾನ ಪಾಠ ಬೋಧಕರಾಗಿ ನೇಮಕಗೊಂಡು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರ ಜೊತೆಗೆ ಶಾಲೆಯನ್ನು ಅಭಿವೃದ್ಧಿಪಡಿಸಲು ತನ್ನ ಸಹೋದ್ಯೋಗಿಗಳ ಜೊತೆಗೆ ನಿರಂತರವಾಗಿ ಶ್ರಮಿಸಿದ್ದು, ಶಾಲೆಯ ಸೌಂದರ್ಯ ಹೆಚ್ಚಿಸುವಲ್ಲಿ ಕಾರಣಕರ್ತರಾಗಿದ್ದಾರೆ.


ವಿದ್ಯಾರ್ಥಿಗಳೊಂದಿಗೆ ಸ್ನೇಹ ಭಾವ ಹೊಂದಿದ್ದು, ಸರಳ ಆದರ್ಶ ಜೀವನವನ್ನು ನಡೆಸುವುದರ ಜೊತೆಗೆ ಶಿಸ್ತುಯುತ ನಡೆ-ನುಡಿ ಹಾಗೂ ವಿದ್ಯಾರ್ಥಿಗಳಿಗೆ ಪ್ರೀತಿಯ ಮಾದರಿ ಶಿಕ್ಷಕರು ಇವರಾಗಿದ್ದಾರೆ. ಸದಾ ಅಧ್ಯಯನಶೀಲರಾಗಿದ್ದು, ವಿದ್ಯಾರ್ಥಿಗಳು ಗ್ರಂಥಾಲಯ ಓದಲು ಪ್ರೇರೇಪಿಸುವರು ಇವರಾಗಿರುತ್ತಾರೆ .ಪರಿಸರ ಪ್ರೇಮಿ ಯಾಗಿರುವ ಇವರು ಶಾಲೆಯ ಉದ್ಯಾನವನ ಶಾಲಾ ಪರಿಸರದಲ್ಲಿ ಗಿಡಗಳ ನೆಡುವ ಕಾರ್ಯ ಚಟುವಟಿಕೆಯನ್ನು ಮಾಡುತ್ತಿದ್ದಾರೆ.

ಸಂವಿಧಾನ ದಿನಾಚರಣೆ ಕ್ವಿಜ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಬಹುಮಾನಗಳಿಸಲು ಮಾರ್ಗದರ್ಶನ ನೀಡಿರುತ್ತಾರೆ.

ಇದೀಗ ಅವರು ಮಂಡ್ಯ ಜಿಲ್ಲೆಯ ವಿಠಲಾಪುರ ಸರಕಾರಿ ಪ್ರೌಢ ಶಾಲೆಗೆ ಸಮಾಜ ವಿಜ್ಞಾನ ಶಿಕ್ಷಕರಾಗಿ ವರ್ಗಾವಣೆ ಹೊಂದಿದ್ದು ,ಅವರನ್ನು ನಿನ್ನೆ ಶಾಲಾ ಶಿಕ್ಷಕವೃಂದ, ಶಾಲಾ ಎಸ್ ಡಿ. ಎಂ. ಸಿ ಸಮಿತಿ , ಪೋಷಕರು ಹಾಗೂ ವಿದ್ಯಾರ್ಥಿಗಳ ವತಿಯಿಂದ ಗೌರವತವಾಗಿ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಎಸ್ .ಡಿ.ಎಂ.ಸಿಯ ಕಾರ್ಯಾಧ್ಯಕ್ಷರಾದ ರುಕ್ಮಯ ಬಾಳಿಂಜ , ಶಾಲಾ ಮುಖ್ಯೋಪಾಧ್ಯಾಯರಾದ ಪ್ರಕಾಶ್. ಎಸ್. ನಾಯ್ಕ್, ಶಿಕ್ಷಣ ತಜ್ಞರಾದ ಡಾಕ್ಟರ್ ಮಾಧವ ಶೆಟ್ಟಿ ಶಾಲಾ ಅಧ್ಯಾಪಕ ವೃಂದ, ಪೋಷಕರು, ಹಿರಿಯ ವಿದ್ಯಾರ್ಥಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ಮುಂಡಾಜೆ: ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲೇ ಹರಿದ ಮಳೆಯ ನೀರು

Suddi Udaya

ಬಂದಾರು: ಶ್ರೀಧರ ಪೂಜಾರಿಯವರ ಮನೆಯ ಹಿಂಬದಿಯ ಗುಡ್ಡ ಕುಸಿತ

Suddi Udaya

ಧರ್ಮಸ್ಥಳದಲ್ಲಿ ನವಜೀವನ ಸದಸ್ಯರ ಶತದಿನೋತ್ಸವ: ಕಾರ್ಯಕ್ರಮದ ಅಂಗವಾಗಿ ವ್ಯಸನಮುಕ್ತ ಸಾಧಕರ ಸಮಾವೇಶ

Suddi Udaya

ಚಿಬಿದ್ರೆ ನಿವಾಸಿ ಚಂದ್ರಕಲಾ ಹೃದಯಾಘಾತದಿಂದ ನಿಧನ

Suddi Udaya

ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಸುಲ್ಕೇರಿಯಲ್ಲಿ ಮನೆಯ ಮೇಲ್ಚಾವಣಿ ಕುಸಿತ: ಶಾಸಕ ಹರೀಶ್ ಪೂಂಜ ಹಾಗೂ ಅಧಿಕಾರಿಗಳ ಭೇಟಿ, ಶೀಘ್ರ ಕ್ರಮಕ್ಕೆ ಸೂಚನೆ

Suddi Udaya

ಬಸದಿಗಳಿಗೆ ಅನುದಾನ : ಸವಣಾಲು ಕ್ಷೇತ್ರದ ಬಸದಿಯ ಅಭಿವೃದ್ಧಿಗೆ ರೂ.9 ಲಕ್ಷ, ಪುದುವೆಟ್ಟು ಬಸದಿಗೆ ರೂ.50 ಲಕ್ಷ ಬಿಡುಗಡೆ

Suddi Udaya
error: Content is protected !!