ಬದಿಯಡ್ಕದಲ್ಲಿ ಕಾರು ಅಪಘಾತ: ಬೆಳ್ತಂಗಡಿಯ ಇಬ್ಬರು ಪ್ರಾಣಾಪಾಯದಿಂದ ಪಾರು

Suddi Udaya

ಬೆಳ್ತಂಗಡಿ: ಕಾಸರಗೋಡಿನ ಬದಿಯಡ್ಕ ಎಂಬಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಡಿಕ್ಕಿ ಹೊಡೆದ ಘಟನೆ ಆ.12ರಂದು ಬೆಳಗ್ಗಿನ ಜಾವಾ ನಡೆದಿದೆ.

ವ್ಯವಹಾರಕ್ಕೆ ಸಂಬಂಧಿಸಿದಂತೆ ಜೊತೆಯಾಗಿ ಪ್ರಯಾಣಿಸುತ್ತಿದ್ದ ಬೆಬೆಳ್ತಂಗಡಿ ಮಟ್ಲ ನಿವಾಸಿ, ಬಿಜೆಪಿ ಕಾರ್ಯಕರ್ತ ಅಜಯ್ ಹಾಗೂ ಕೆಎಸ್‌ಎಮ್‌ಸಿಎ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಡಾಜೆಯ ಪಿ.ಸಿ ಸೆಬಾಸ್ಟಿಯನ್ ‌ ಅವರು ಅಪಾಯದಿಂದ ಪಾರಾದವರು.

ಘಟನೆ ವೇಳೆ ಅಜಯ್ ಅವರು ವಾಹನ ಚಾಲನೆ ಮಾಡುತ್ತಿದ್ದರು. ಬೆಳಗ್ಗಿನ ಜಾವಾ ನಿದ್ದೆಯ ಮಂಪರಿನಲ್ಲಿ ಈ ಅವಘಡ ಆಗಿದೆ ಎನ್ನಲಾಗಿದೆ.
ಅಪಘಾತದದಿಂದಾಗಿ ಕಾರಿನ ಮುಂಭಾಗಕ್ಕೆ ಹೆಚ್ಚಿನ ಹಾನಿಯಾಗಿದೆ. ಆದರೆ ಇಬ್ಬರೂ ಕೂಡ ಬೆಲ್ಟ್ ಧರಸಿದಿದ್ದರಿಂದ ಹೆಚ್ಚಿನ ಅಪಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

Leave a Comment

error: Content is protected !!