ಗೇರುಕಟ್ಟೆ: ಸ್ನೇಹ ಸಂಗಮ ಆಟೋ-ಚಾಲಕ ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya

ಗೇರುಕಟ್ಟೆ: ಸ್ನೇಹ ಸಂಗಮ ಅಟೋ ಚಾಲಕ ಮಾಲಕರ ಸಂಘ ಗೇರುಕಟ್ಟೆ ಇದರ ನೂತನ ಅಧ್ಯಕ್ಷರಾಗಿ ಜಿ ವೈ ಬದ್ರುದ್ದೀನ್, ಕಾರ್ಯದರ್ಶಿಯಾಗಿ ಸಿದ್ದೀಕ್ ಜಿ.ಹೆಚ್, ಉಪಾಧ್ಯಕ್ಷರಾಗಿ ಕುಶಾಲಪ್ಪ ಗೌಡ, ಜೊತೆ ಕಾರ್ಯದರ್ಶಿಯಾಗಿ ಲೋಕಿತ್, ಕೋಶಾಧಿಕಾರಿಯಾಗಿ ಗಣೇಶ್ ಕೆ. ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ ವಸಂತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾಜಿ ಕಾರ್ಯದರ್ಶಿ ರಮೇಶ್ ಪೂಜಾರಿ, ಗೌರವಾಧ್ಯಕ್ಷರಾದ ಸತೀಶ್ ಶೆಟ್ಟಿ ನೆಲ್ಲಿಕಟ್ಟೆ, ಬಿಎಂಎಸ್ ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಕುದ್ರಡ್ಕ , ಉಪಾಧ್ಯಕ್ಷರಾದ ಲವಕುಶ ಮತ್ತು ಸ್ನೇಹ ಸಂಗಮ ಸಂಘದ ಹಿರಿಯರಾದಂತಹ ಜಾರಪ್ಪ ಶೆಟ್ಟಿ ನಾಳ ಹಾಗೂ ಸ್ಥಳೀಯರಾದ ಅಬೂಬಕ್ಕರ್ ಎ., ಸಂದೀಪ್ ಪಂಚಮಲಕೊಡಿ, ನಾಸಿರುದ್ದೀನ್, ಅಬ್ದುಲ್ ರಹಿಮಾನ್ ಪಿ ಬಿ, ಅಬೂಬಕ್ಕರ್, ರೊನಾಲ್ಡ್ ಪಿಂಟೊ, ರತ್ನಾಕರ್ ಪೂಜಾರಿ, ಕೀರ್ತಿ ಕುಮಾರ್, ತಾರನಾಥ್ ಬಳ್ಳಿದಡ್ಡ, ರಕ್ಷಿತ್ ಹಾಗೂ ಶೇಕುಂಞಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷ ಪದ್ಮನಾಭ ನಿರೂಪಿಸಿದರು.

Leave a Comment

error: Content is protected !!