ಬಾಯ೯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ 10ನೇ ಬಾರಿಗೆ’ ಸಾಧನ ಶ್ರೀ ಪ್ರಶಸ್ತಿ ‘

Suddi Udaya

Updated on:

ಬೆಳ್ತಂಗಡಿ: ಬಾಯ೯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸವ೯ತೋಮುಖ ಅಭಿವೃದ್ಧಿ ಹಾಗೂ
ವಿವಿಧ ಚಟುವಟಿಕೆ ಹಾಗೂ ಸಾಧನೆಯನ್ನು ಗುರುತಿಸಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 10ನೇ ಬಾರಿಗೆ
‘ಸಾಧನ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.
‌ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎನ್ ‌.ಎಂ ರಾಜೇಂದ್ರ ಕುಮಾರ್ ಅವರು ಸಂಘದ ಹಂಗಾಮಿ ಅಧ್ಯಕ್ಷ ಪಾಶ್ವ೯ನಾಥ್ ಜೈನ್ ಹಾಗೂ ‌ಮುಖ್ಯ ಕಾಯ೯ನಿವಾ೯ಹಣಾಧಿಕಾರಿ‌ ಸತೀಶ್ ಗೌಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.


ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಪ್ರಸನ್ನ ಗೌಡ,
ನಿರ್ದೇಶಕರು ಗಳಾದ ಪ್ರವೀಣ್ ಶೆಟ್ಟಿ , ರಾಜೇಶ್ ರೈ, ಶಿವರಾಮ ನಾಯ್ಕ, ವೃತ್ತಿಪರ ನಿದೇ೯ಶಕ ಚಂದ್ರಶೇಖರ್ , ಶಾಖಾ ವ್ಯವಸ್ಥಾಪಕ ಶಶಿಧರ ಅಡಪ ಮೊದಲಾದವರು ಉಪಸ್ಥಿತರಿದ್ದರು.

Leave a Comment

error: Content is protected !!