ಕಾಯರ್ತಡ್ಕ: ಭಾರತ್ ಸ್ಟೋರ್ಸ್ ಗೆ ನುಗ್ಗಿದ ಕಳ್ಳರು: ನಗದು ಜೊತೆಗೆ ಇನ್ನಿತರ ವಸ್ತುಗಳನ್ನು ದೋಚಿ ಪರಾರಿ

Suddi Udaya

ಕಾಯರ್ತಡ್ಕ: ಇಲ್ಲಿಯ ನೇತಾಜಿ ಆಟೋ ನಿಲ್ದಾಣ ದ ಬಳಿ ಇರುವ ಮಂಜುನಾಥ ಗೌಡ ಎಂಬುವರ ಭಾರತ್ ಸ್ಟೋರ್ಸ್ ಗೆ ಆ.22ರಂದು ತಡರಾತ್ರಿ ಕಳ್ಳರು ನುಗ್ಗಿ ರೂ.15,000 ನಗದು, ಸಿಗರೇಟ್ ಪ್ಯಾಕ್ ಗಳು ಹಾಗೂ ಅಂಗಡಿಯಲ್ಲಿದ್ದ ಇನ್ನಿತರ ವಸ್ತುಗಳನ್ನು ದೋಚಿ ಅಂಗಡಿಯ ಬೀಗ ಸಮೇತ ಪರಾರಿಯಾಗಿದ್ದಾರೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

error: Content is protected !!