ಬ್ರಹ್ಮಾನಂದ ಶ್ರೀ ಯವರಿಂದ ಕನ್ಯಾಡಿ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕನ್ಯಾಡಿ || : ಹಿಂದೂ ಧಾರ್ಮಿಕ ಸೇವಾ ಸಮಿತಿ ಕನ್ಯಾಡಿ || ಇದರ ಆಶ್ರಯದಲ್ಲಿ ನಡೆಯಲಿರುವ 10ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಹಿಂ.ಧಾ.ಸೇ. ಸಮಿತಿ ಉಪಾಧ್ಯಕ್ಷ ಅರುಣ್ ನಾಯ್ಕ, ಕಾರ್ಯದರ್ಶಿ ಗಣೇಶ್ ಗೌಡ ಬಜಿಲ, ಜೊತೆ ಕಾರ್ಯದರ್ಶಿ ವಿಧ್ಯಾಧರ ರೈ , ಗಣೇಶೋತ್ಸವದ ಅಧ್ಯಕ್ಷರಾದ ಪ್ರಭಾಕರ್ ಸಿ.ಜಿ ಕನ್ಯಾಡಿ , ಕಾರ್ಯದರ್ಶಿ ಸಚಿನ್ ಗೌಡ ಕಲ್ಮಂಜ , ಕೋಶಾಧಿಕಾರಿ ಅವಿನಾಶ್ ಶೆಟ್ಟಿ ನೇತ್ರಾವತಿ, ಕಾರ್ಯಧ್ಯಕ್ಷರಾದ ಗೋವಿಂದ ಸುವರ್ಣ, ಸಂಯೋಜಕಿ ಚಂದ್ರಾವತಿ ಬಜಿಲ, ಸಮಿತಿಯ ಪ್ರಮುಖರಾದ ಸುದರ್ಶನ್ ಕನ್ಯಾಡಿ, ಕೃಷ್ಣಪ್ಪ ಗುಡಿಗಾರ್, ಪ್ರಭಾಕರ ಬಜಿಲ, ಚಂದ್ರಶೇಖರ್ , ರಾಧಾಕೃಷ್ಣ , ಶ್ರೀಮತಿ ವಿಮಲ, ಶ್ರೀಮತಿ ವಿಜಯ, ಶ್ರೀಮತಿ ವೇದಾವತಿ ಹಾಗೂ ಮತ್ತಿತರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!