ನಿಡ್ಲೆ ಹಾಗೂ ಬೂಡುಜಾಲುವಿನಲ್ಲಿ ಸೌಜನ್ಯಪರ ಹಾಕಿದ ಬ್ಯಾನರ್ ನ್ನು ಕಿತ್ತೆಸೆದ ಕಿಡಿಗೇಡಿಗಳು

Suddi Udaya

ನಿಡ್ಲೆ: ನಿಡ್ಲೆ ಮತ್ತು ಬೂಡುಜಾಲುವಿನಲ್ಲಿ ಸೌಜನ್ಯಪರ ನಾಗರಿಕರು ಅಳವಡಿಸಿದ ಬ್ಯಾನರ್ ನ್ನು ಕಿಡಿಗೇಡಿಗಳು ಕಿತ್ತೆಸೆದ ಘಟನೆ ಸೆ.6 ರಂದು ರಾತ್ರಿ ನಡೆದಿದೆ.

ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂದು ನಾಗರಿಕರು ನಿಡ್ಲೆ ಹಾಗೂ ಬೂಡುಜಾಲುವಿನಲ್ಲಿ ಹಾಕಿದ ಬ್ಯಾನರ್ ನ್ನು ರಾತ್ರೋರಾತ್ರಿ ಯಾರೋ ಕಿಡಿಗೇಡಿಗಳು ಕಿತ್ತೆಸೆದು ಹೋಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬ್ಯಾನರ್ ಹರಿದ ಚಿತ್ರಗಳನ್ನು ಹರಿಯಬಿಡಲಾಗಿದ್ದು, ಕಿಡಿಗೇಡಿಗಳ ವಿರುದ್ಧ ನಾಗರಿಕರು ಆಕ್ರೋಶಗೊಂಡಿದ್ದಾರೆ.

Leave a Comment

error: Content is protected !!