24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೂಟ ಮಹಾ ಜಗತ್ತು ಸಾಲಿಗ್ರಾಮ 70ನೇ ಕೇಂದ್ರೀಯ ಮಹಾಧಿವೇಶನ: ಬೆಳ್ತಂಗಡಿ ಮಹಿಳಾ ವೇದಿಕೆಯ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ

ಬೆಳ್ತಂಗಡಿ : ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ), ಉಡುಪಿ ಜಿಲ್ಲೆ ಇದರ 70ನೇ ಕೇಂದ್ರೀಯ ಮಹಾಧಿವೇಶನ, ಕಾಸರಗೋಡಿನ ಕುಮಾರಮಂಗಲದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅದ್ದೂರಿಯಾಗಿ ಇತ್ತೀಚೆಗೆ ಜರುಗಿತು.

ಈ ಸಂಧರ್ಭದಲ್ಲಿ ಬೆಳ್ತಂಗಡಿ ಕೂ. ಮ. ಜ. ಇದರ ಮಹಿಳಾವೇದಿಕೆಯ ಸದಸ್ಯೆಯರು ಸಾಂಸ್ಕೃತಿಕ ಕಾರ್ಯಕ್ರಮ ವನ್ನು ನೀಡಿದರು.

ಹಾದಿ ತಪ್ಪುತ್ತಿರುವ ಯುವ ಜನಾಂಗ, ತಮ್ಮ ಸಂಸ್ಕೃತಿಯ, ದೇಶದ ಅಸ್ಮಿತೆಯನ್ನು ಮರೆಯದೆ ಹೊಸತನವನ್ನು ಮೈಗೂಡಿಸಿಕೊಂಡು ಭಾರತವನ್ನು ವಿಶ್ವಗುರು ಮಾಡುವಲ್ಲಿ ತಮ್ಮ ಅಳಿಲುಸೇವೆ ನೀಡಬೇಕು ಎಂಬ ಸತ್ವವನ್ನು ಸಾರುವ ವಿದ್ಯಾಶ್ರೀ ಅಡೂರ್ ಅವರ ಪರಿಕಲ್ಪನೆಯ ವೈವಿಧ್ಯಪೂರ್ಣ ಕಾರ್ಯಕ್ರಮ ಇದಾಗಿದ್ದು ಸೂರ್ಯನಮಸ್ಕಾರ, ಕುಣಿತಭಜನೆ, ಜಾನಪದ ನೃತ್ಯ, ಇತ್ಯಾದಿಗಳನ್ನು ಒಳಗೊಂಡಿತ್ತು.


ಯೋಗಾಭ್ಯಾಸದಲ್ಲಿ ಶಿವಕಿರಣ ಹೊಳ್ಳ, ಸುಶಾಂತ್ ಹೊಳ್ಳ, ಕುಣಿತ ಭಜನೆಯಲ್ಲಿ ನಳಿನಿ ಹೊಳ್ಳ, ಸುಜಾತ ರಾವ್, ಲಕ್ಷ್ಮಿ ಹೊಳ್ಳ, ಧನಲಕ್ಷ್ಮಿಹೊಳ್ಳ, ಮಹಾಲಕ್ಷ್ಮಿ, ಗೀತಾ ರಾವ್, ಶಾಂತಲ ಕಾರಂತ್, ಸವಿತ ಹೊಳ್ಳ, ಜಾನಪದ ನೃತ್ಯದಲ್ಲಿ ವಿದ್ಯಾಶ್ರೀ ಅಡೂರ್. ಕವಿತಾ ಹೊಳ್ಳ, ಲಾವಣ್ಯ, ರಕ್ಷಿತಾ, ಆಶಾ, ಅಕ್ಷತಾ, ಸಂತೋಷಿನಿ ಮತ್ತು ರೂಪಕದಲ್ಲಿ ಅಂಜನಾ ಭಾಗವಹಿಸಿದ್ದರು.

Related posts

ಉಜಿರೆ ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಉನ್ನತಿ ಫೌಂಡೇಶನ್ ವತಿಯಿಂದ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ

Suddi Udaya

ಫೆ.11 : ಬೆಳ್ತಂಗಡಿ ಧರ್ಮಪ್ರಾಂತ್ಯ ಸ್ಥಾಪನೆಯ ಬೆಳ್ಳಿ ಹಬ್ಬದ ಸಂಭ್ರಮ : 25 ಮನೆಗಳ ಕೀಲಿ ಕೈ ಹಸ್ತಾಂತರ ಹಾಗೂ ವಿದ್ಯಾನಿಧಿ ಕಾರ್ಯಕ್ರಮ

Suddi Udaya

ಅಂತರ್ ಕಾಲೇಜು ಚರ್ಚಾ ಸ್ಪರ್ಧೆ: ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ ವಿದ್ಯಾರ್ಥಿ ಫಾತಿಮಾತ್ ರಾಫಿಯಾ ರಿಗೆ ದ್ವಿತೀಯ ಸ್ಥಾನ

Suddi Udaya

ಬೊಂಬಾಯ್ ಡ್ ತುಳುನಾಡ್ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಕ್ಷಿತಿ ಕೆ. ರೈ ರವರಿಗೆ ತೌಳವ ಸಿರಿ ಪ್ರಶಸ್ತಿ

Suddi Udaya

ಬೆಳ್ತಂಗಡಿ ಸ.ಪ್ರ.ದರ್ಜೆ ಕಾಲೇಜಿನಲ್ಲಿ ಹೂಡಿಕೆದಾರರ ಅರಿವು ಜಾಗೃತಿ ಕಾರ್ಯಾಗಾರ

Suddi Udaya

ತೋಟತ್ತಾಡಿ ನಿವಾಸಿ ಜಯರಾಮ ರವರ ಚಿಕಿತ್ಸೆಗೆ ನೆರವಾಗಿ

Suddi Udaya
error: Content is protected !!