September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ದೊಂಡೊಲೆಯ ವಿಕಲಚೇತನ ಕುಟುಂಬಕ್ಕೆ ಸಹಾಯಹಸ್ತ : ಅರ್ಹರ ಸೇವೆಗೆ ಬೆಳ್ತಂಗಡಿ ಲಯನ್ಸ್ ತೆರೆದುಕೊಂಡಿದೆ-ವಲಯಾಧ್ಯಕ್ಷ ದಿನೇಶ್

ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿ ಯು ಅರ್ಹರನ್ನು ಹುಡುಕಿ ಸೇವೆ ಮಾಡುವುದರಲ್ಲಿ ಮುಕ್ತ ಮನಸ್ಸಿನಿಂದ ತೆರೆದುಕೊಂಡಿದೆ ಎಂದು ವಲಯಾಧ್ಯಕ್ಷ ದಿನೇಶ್ ಎಂ.ಕೆ ಮೂಡುಬಿದಿರೆ ಮೆಚ್ಚುಗೆಯ ಮಾತನ್ನಾಡಿದರು‌.
ಪ್ರಾಂತ್ಯ-12 ರಲ್ಲಿ ಬರುವ ಬೆಳ್ತಂಗಡಿ ಘಟಕಕ್ಜೆ ಅಧಿಕೃತ ಭೇಟಿ ಮಾಡಿದ ಅವರು ಸೇವಾ ಕಾರ್ಯ ನಡೆಸಿಕೊಟ್ಟರು.
ವಿಶೇಷವಾಗಿ ಧರ್ಮಸ್ಥಳ ಗ್ರಾಮದ ದೊಂಡೊಲೆ ಎಂಬಲ್ಲಿ ಅತಂತ್ರ ಸ್ಥಿತಿಯಲ್ಲಿ ದಯನೀಯವಾಗಿ ಬದುಕು ಸಾಗಿಸುತ್ತಿರುವ ವಿಕಲ ಚೇತನರಿರುವ ಕುಟುಂಬಕ್ಕೆ ಆರ್ಥಿಕ ಸಹಕಾರ ಹಾಗೂ ಕುಟುಂಬದ ವಿದ್ಯಾರ್ಥಿಗೆ ಶೈಕ್ಷಣಿಕ ರಕ್ಷೆ ಹಸ್ತಾಂತರಿಸಿದರು.


ಬೆಳ್ತಂಗಡಿ ಲಯನ್ಸ್ ಘಟಕದ ಸುವರ್ಣ ಮಹೋತ್ಸವ ಅಧ್ಯಕ್ಷ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮೂಡುಬಿದಿರೆ, ವೇಣೂರು, ಸುಲ್ಕೇರಿ ಮತ್ತು ಬೆಳ್ತಂಗಡಿಯ ಅಧ್ಯಕ್ಷರುಗಳು, ನಿಕಟಪೂರ್ವ ಅಧ್ಯಕ್ಷ ದೇವಿಪ್ರಸಾದ್ ಬೊಳ್ಮ ಉಪಸ್ಥಿತರಿದ್ದರು.


ಕೃಷ್ಣ ಆಚಾರ್ ಪ್ರಾರ್ಥನೆ ಹಾಡಿದರು. ರಾಮಕೃಷ್ಣ ಗೌಡ ವೇದಿಕೆಗೆ ಆಹ್ವಾನಿಸಿದರು. ವಸಂತ ಶೆಟ್ಟಿ ವಲಯಾಧ್ಯಕ್ಷ ರನ್ನು ಪರಿಚಯಿಸಿದರು. ಧತ್ತಾತ್ರೇಯ ಗೊಲ್ಲ ಧ್ವಜವಂದನೆ, ಅಶ್ರಫ್ ಆಲಿಕುಂಞಿ ನೀತಿ ಸಂಹಿತೆ ವಾಚಿಸಿದರು. ಕಾರ್ಯದರ್ಶಿ ಅನಂತಕೃಷ್ಣ ವರದಿ ವಾಚಿಸಿ ಬಳಿಕ ವಲಯಾಧ್ಯಕ್ಷರಿಗೆ ಹಸ್ತಾಂತರಿಸಿದರು. ಕೋಶಾಧಿಕಾರಿ ಶುಭಾಶಿಣಿ ವಂದಿಸಿದರು.
ಪೂರ್ವ ಪ್ರಾಂತ್ಯಾಧ್ಯಕ್ಷ ನಿತ್ಯಾನಂದ ನಾವರ ಅವರ ಪುತ್ರಿ ಸಿ.ಎ ಉತ್ತೀರ್ಣರಾದ ನಿಮಿತ್ತ ಭೋಜನ ವ್ಯವಸ್ಥೆಯನ್ನು ಪ್ರಾಯೋಜಿಸಿದ್ದರು.
ಸೇವಾ ಕಾರ್ಯ ನಿಮಿತ್ತ ಬಡ ಕುಟುಂಬಕ್ಕೆ ಅಕ್ಕಿ, ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ವಿತರಿಸಲಾಯಿತು.

Related posts

ಉಜಿರೆಯಲ್ಲಿ ನಡೆದ ಆ್ಯಸಿಡ್ ದಾಳಿ ಪ್ರಕರಣ; 29 ವರ್ಷದ ಬಳಿಕ ಆರೋಪಿ ದೋಷಮುಕ್ತ

Suddi Udaya

ಎಸ್ ಕೆ ಎಸ್ ಎಸ್ ಎಫ್ ಮದ್ದಡ್ಕ ಶಾಖೆ ವತಿಯಿಂದ ಯುನಿಟ್ ಕ್ಯಾಬಿನೆಟ್‌ಮೀಟ್ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗೆ‌ ಸನ್ಮಾನ

Suddi Udaya

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಬೆಳ್ತಂಗಡಿ ತಾಲೂಕು ಘಟಕದಿಂದ ನಿವೃತ್ತ ಯೋಧ ಸಿ ಜಾರ್ಜ್ ಕುಟ್ಟಿ ಯವರಿಗೆ ಸನ್ಮಾನ

Suddi Udaya

ಪದ್ಮುಂಜ ಸಿ.ಎ ಬ್ಯಾಂಕ್ ಬಳಿ ಸರ್ಕಾರಿ ಗೇರುತೋಟ ಹಾಗೂ ರಬ್ಬರ್ ತೋಟಕ್ಕೆ ತಗುಲಿದ ಬೆಂಕಿ : ಅಪಾರ ನಷ್ಟ

Suddi Udaya

ಲಾಯಿಲ ಮತ್ತು ಮೇಲಂತಬೆಟ್ಟು ಗ್ರಾಮಗಳಲ್ಲಿ ಆರ್.ಪಿ.ಸಿ ವತಿಯಿಂದ ಮೂರು ದಿನಗಳ ಚಾರಿಟಿ

Suddi Udaya

ಉಜಿರೆ ಶ್ರೀ ಧ.ಮಂಜುನಾಥೇಶ್ವರ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya
error: Content is protected !!