ಬೆಳ್ತಂಗಡಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ : ನಡ ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ

Suddi Udaya

ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುತ್ತಿರುವ ಬೆಳ್ತಂಗಡಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟವು ಸೆಪ್ಟೆಂಬರ್ 26ರಂದು ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ನಡ ಸರಕಾರೀ ಪದವಿ ಪೂರ್ವ ಕಾಲೇಜಿನ ಎರಡೂ ತಂಡಗಳು ದ್ವಿತೀಯ ಸ್ಥಾನವನ್ನು ಗಳಿಸಿರುತ್ತದೆ.

ಈ ಸಂದರ್ಭದಲ್ಲಿ ನಿಕ್ಷಿತಾ ‘ಬೆಸ್ಟ್ ರೈಡರ್ ‘ ಪ್ರಶಸ್ತಿಯನ್ನು ಹಾಗೂ ಮಹಮ್ಮದ್ ಮುಸ್ತಾಕ್ ‘ಬೆಸ್ಟ್ ಡಿಫೆಂಡರ್’ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಸಂಸ್ಥೆಯ ಪ್ರಾಂಶುಪಾಲರಾದ ಚಂದ್ರಶೇಖರ್ ಇವರ ಮಾರ್ಗದರ್ಶನದಲ್ಲಿ, ಕ್ರೀಡಾ ಮಾರ್ಗದರ್ಶಿಯಾದ ವಸಂತಿ ಪಿ. ಇವರ ಮುಂದಾಳತ್ವದಲ್ಲಿ ಈ ಗೆಲುವು ಸಾಧ್ಯವಾಯಿತು.

Leave a Comment

error: Content is protected !!