25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ‌ ಸಂಘದಿಂದ ಜಾಗತಿಕ ಔಷಧ ತಜ್ಞರ ದಿನಾಚರಣೆ

ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರು ಸಂಘದ ಆಶ್ರಯದಲ್ಲಿ ಜಾಗತಿಕ ಔಷಧ ತಜ್ಞರ ದಿನದ ಆಚರಣೆಯು ಇಂದು ಉಜಿರೆಯ ಕಾಶಿಬೆಟ್ಟಿನ ಅರಳಿ ರಸ್ತೆಯಲ್ಲಿರುವ ರೋಟರಿ ಸೇವಾ ಭವನದಲ್ಲಿ ನಡೆಯಿತು.

ಸಹಾಯಕ ಔಷಧ ನಿಯಂತ್ರಕರಾದ ಉದಯ ಕಿಶೋರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಡುವ ಕೆಲಸವನ್ನು ನಗು ನಗುತಾ ಮಾಡಿ ನೀವು ಮಾಡುವ ಕೆಲಸದ ಬಗ್ಗೆ ಹೆಮ್ಮೆ ಇರಲಿ ಎಂದು ಹೇಳಿದರು.


ವೇದಿಕೆಯಲ್ಲಿ ಬೆಳ್ತಂಗಡಿ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶ್ರೀಧರ ಕೆ.ವಿ , ಮಂಗಳೂರಿನ ಸಹಾಯಕ ಔಷಧ ನಿಯಂತ್ರಕರಾದ ಉದಯ ಕಿಶೋರ್, ಕರ್ನಾಟಕ ಔಷಧಿ ವ್ಯಾಪಾರಿಗಳ ಸಂಘ ಇದರ ಗೌರವ ಕಾರ್ಯದರ್ಶಿ ಎ.ಕೆ ಜೀವನ್ , ಹಿರಿಯ ನಿವೃತ್ತ ಸರಕಾರಿ ಫಾರ್ಮಸಿಸ್ಟ್ ಜನಾರ್ದನ ಮಂಗಳೂರು, ಸೌತ್ ಕೆನೆರಾ ಡಿಸ್ಟ್ರಿಕ್ಟ್‌ ಕೆಮಿಸ್ಡ್ ಎಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ನ ಅಧ್ಯಕ್ಷರಾದ ಸುಜಿತ್ ಭಿಡೆ, ಕಾರ್ಯದರ್ಶಿ‌ಗಳಾದ ಗುರುಚರಣ್ ರಾವ್, ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಮಾಧವ ಗೌಡ, ಕೋಶಾಧಿಕಾರಿ ಗಣಪತಿ ಭಟ್ ಉಪಸ್ಥಿತರಿದ್ದರು.

ನಂತರ ಹಿರಿಯ ಫಾರ್ಮಸಿಸ್ಟ್ ಆಗಿರುವ ಬಿ.ಎಂ.ಮೆಡಿಕಲ್ಸ್ ನ ರಮಾನಂದ ಅವರನ್ನು ಹಾಗೂ ಹಿರಿಯ ಔಷಧಿ ವ್ಯಾಪಾರಿ ನಾರಾವಿಯ ಗಣೇಶ್ ಮೆಡಿಕಲ್ಸ್ ನ ರವಿಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ಅದೇ ರೀತಿ ಆರೋಗ್ಯ ಕ್ಷೇತ್ರದಲ್ಲಿ 50 ವರ್ಷದಿಂದ ವ್ಯಾಪಾರ ಮಾಡುತ್ತಿರುವ ಅಮರ್ ಡ್ರಗ್ ಹೌಸ್ ಮಾಲಕರಾದ ಗಣಪತಿ ಭಟ್, ಹಾಗೂ ಧರ್ಮಸ್ಥಳದ ಅನ್ನ ಪೂರ್ಣ ಮೆಡಿಕಲ್ಸ್ ನ ರಜತ್ ರಾವ್ ಅವರನ್ನು ಸನ್ಮಾನಿಸಲಾಯಿತು. ಕಳೆದ ಆರು ವರ್ಷಗಳಿಂದ ತನ್ನ ಔಷಧ ವ್ಯಾಪಾರದ ಜೊತೆಗೆ ಆನಾರೋಗ್ಯ ಪೀಡಿತರ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿರುವ ಉಜಿರೆಯ ಎಸ್ ಎ ಮೆಡಿಕಲ್ಸ್ ನ ಮಾಲಕರಾದ ಪ್ರಕಾಶ್ ಫರ್ನಾಂಡಿಸ್ ಅವರನ್ನು ಗೌರವಿಸಲಾಯಿತು. ತಾಲೂಕಿನ 10 ಜನ ದೈಹಿಕ ಅಶಕ್ತರನ್ನು ಗುರುತಿಸಿ ಅವರಿಗೆ ಧನಸಹಾಯ ಮಾಡಲಾಯಿತು.

ಈ ಸಂದರ್ಭದಲ್ಲಿ ಪಶು ಸಂಗೋಪನಾ ಇಲಾಖೆಗೆ ಸಂಘದ ವತಿಯಿಂದ ಆಂಟಿ ರೇಬೀಸ್ ಲಸಿಕೆಗಳನ್ನು ಹಸ್ತಾಂತರಿಸಲಾಯಿತು. ನಿಕಟ ಪೂರ್ವ ಅಧ್ಯಕ್ಷ ಎಂ ಚಂದ್ರಶೇಖರ ಹಾಗೂ ನಿಕಟ ಪೂರ್ವ ಕಾರ್ಯದರ್ಶಿ ರಘುನಾಥ ದಾಮ್ಲೆ ಅವರನ್ನು ಅಭಿನಂದಿಸಲಾಯಿತು. ಸಂಘದ ಸದಸ್ಯರಿಗೆ ಔಷದೀಯ ಸಸ್ಯಗಳನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮವು ಸನ್ನಿಧಿ ಮೆಡಿಕಲ್ಸ್ ನ ಶ್ರೀಮತಿ ಅಶ್ವಿನಿಯವರ ಪ್ರಾರ್ಥಿಸಿ, ಸುಜಿತ್ ಭಿಡೆಯವರು ಸ್ವಾಗತಿಸಿದರು .ಕು.ಬಿಂದಿಯಾ ಕಾರ್ಯಕ್ರಮವನ್ನು ನಿರೂಪಿಸಿ, ಉದಯ ಕುಮಾರ ಜೈನ್ ವಂದಿಸಿದರು.

Related posts

ಆರಂಬೋಡಿ ಗ್ರಾ.ಪಂ. ಗ್ರಾಮ ಸಭೆ

Suddi Udaya

ಮೊಗ್ರು ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಸಭೆ; ನೂತನ ಸಮಿತಿ ರಚನೆ

Suddi Udaya

ಉಜಿರೆ: ಅಗತ್ಯ ದಾಖಲೆ ಹಾಗೂ ನಗದು ಇದ್ದ ಪರ್ಸ್ ಬಿದ್ದು ಕಳೆದುಹೋಗಿದೆ

Suddi Udaya

ಕಳೆಂಜ: ಪಲ್ಲದಂಗಡಿ, ಕಾಂತ್ರೇಲು ಹಾಗೂ ಹತ್ಯಡ್ಕದ ಮುದ್ದಿಗೆ, ಕುಂಟಾಲಪಳಿಕೆ ಕೆಎಸ್ ಆರ್ ಟಿಸಿ ಬಸ್ಸು ಸಂಚಾರಕ್ಕೆ ಚಾಲನೆ: ಬಸ್ ನ್ನು ಸ್ವಾಗತಿಸಿದ ಮುದ್ದಿಗೆಯ ಗ್ರಾಮಸ್ಥರು

Suddi Udaya

ಶಿಶಿಲ: ‘ವೇದ ಕುಸುಮ’ ಶಿಬಿರ ಸಂಪನ್ನ

Suddi Udaya

ಪದ್ಮುಂಜ ಸಿ.ಎ ಬ್ಯಾಂಕ್ ಬಳಿ ಸರ್ಕಾರಿ ಗೇರುತೋಟ ಹಾಗೂ ರಬ್ಬರ್ ತೋಟಕ್ಕೆ ತಗುಲಿದ ಬೆಂಕಿ : ಅಪಾರ ನಷ್ಟ

Suddi Udaya
error: Content is protected !!