ನಾರಾವಿ ಭಾರತ್ ಪ್ರೆಂಡ್ಸ್ ವತಿಯಿಂದ ಕಬಡ್ಡಿ ಪಂದ್ಯಾಟ: ಸುಲ್ಕೇರಿ ಜೆಕೆ ಅಟ್ಯಾಕರ್ಸ್ ತಂಡ ಪ್ರಥಮ ಸ್ಥಾನ

Suddi Udaya

ನಾರಾವಿ: ನಾರಾವಿ ಭಾರತ್ ಪ್ರೆಂಡ್ಸ್ ವತಿಯಿಂದ ನಡೆದ ಕಬಡ್ಡಿ ಪಂದ್ಯಾಟವು ಅ.1 ರಂದು ನಾರಾವಿಯಲ್ಲಿ ನಡೆಯಿತು.

ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಜೆಕೆ ಅಟ್ಯಾಕರ್ಸ್, ಸುಲ್ಕೇರಿ , ದ್ವಿತೀಯ ಮಾರಿಗುಡಿ ಇಂಚರ, ಪಿಲ್ಯ, ತೃತೀಯ: ವಿ ಎಸ್ ಅಳಿಯೂರು, ಚತುರ್ಥ ಶಿವಶಕ್ತಿ ಕುತ್ಲೂರು ಇವರು ಪಡೆದುಕೊಂಡಿದ್ದಾರೆ.

ಬೆಸ್ಟ್ ರೈಡರ್ ಆಗಿ ದೀಕ್ಷಿತ್, ಶಿವಶಕ್ತಿ ಕುತ್ಲೂರು , ಬೆಸ್ಟ್ ಡಿಫ಼ೆಂಡರ್ ವರುಣ್, ಜೆಕೆ ಅಟ್ಯಾಕರ್ಸ್, ಸುಲ್ಕೇರಿ,ಬೆಸ್ಟ್ ಆಲ್ರೌಂಡರ್ ರಂಜಿತ್, ಇಂಚರ ಪಿಲ್ಯ, ಹೀರೋ ಆಫ಼್ ದಿ ಟೂರ್ನಮೆಂಟ್: ವಿಘ್ನೇಶ್, ಜೆಕೆ ಅಟ್ಯಾಕರ್ಸ್, ಸುಲ್ಕೇರಿ. ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ತಂಡಗಳ ಮಾಲಕರು, ತಂಡದ ವ್ಯವಸ್ಥಾಪಕರು, ಆಟಗಾರರು, ಅಮೆಚೂರು ಕಬಡ್ಡಿ ಅಸೋಸಿಯೇಷನ್ (ರಿ), ವಲಯ ಕಬಡ್ಡಿ ಯೂನಿಯನ್ (ರಿ), ಶಿವಶಕ್ತಿ ಫ಼್ರೆಂಡ್ಸ್ ಕ್ಲಬ್‌‌ (ರಿ) ನ ಪದಾಧಿಕಾರಿಗಳು ಮತ್ತು ಸದಸ್ಯರು, ತೀರ್ಪುಗಾರರು, ಸ್ಕೋರರ್ಸ್,ಲೈನ್ ಅಂಪೈರ್ಸ್, ವೀಕ್ಷಕ ವಿವರಣೆಗಾರರು‍, ಪಂದ್ಯಾಟದ ಪೋಷಕರು, ದಾನಿಗಳು, ಸಹಕರಿಸಿದರು.

,

Leave a Comment

error: Content is protected !!