ಕೊಯ್ಯೂರು: ಆದೂರು ಪೇರಾಲಿನ ವಿಜಯ ಸ್ಟೋರ್ ಮಾಲಕ ಸಾದೂರು ಮುರಳೀಧರ ಭಟ್ ನಿಧನ

Suddi Udaya

ಕೊಯ್ಯೂರು: ಕೊಯ್ಯೂರು ಗ್ರಾಮದ ಆದೂರು ಪೇರಾಲ್ ನಲ್ಲಿ ಸುಮಾರು 38 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದ ಆದೂರು ಪೇರಾಲಿನ ವಿಜಯ ಸ್ಟೋರ್ ಮಾಲಕ ಸಾದೂರು ಮುರಳೀಧರ ಭಟ್ ರವರು ಇತ್ತೀಚೆಗೆ ನಿಧನಹೊಂದಿದರು.

ಇವರು ಕೊಯ್ಯೂರಿನಲ್ಲಿ ಆರಂಭವಾದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷರಾಗಿ, ಯುವಕ ಮಂಡಲದ ಅಧ್ಯಕ್ಷರಾಗಿ , ಗೌರವಾಧ್ಯಕ್ಷರಾಗಿ, ಆದೂರು ಪೇರಾಲ್ ಮಹಮ್ಮಾಯಿ ದೈವಸ್ಥಾನದ ಗೌರವಾಧ್ಯಕ್ಷರಾಗಿ, ಊರಿನ ದೇವಸ್ಥಾನ, ದೈವಸ್ಥಾನಗಳಿಗೆ ಸಲಹೆಗಾರರಾಗಿ, ಎಲ್ಲರೊಂದಿಗೂ ಸದಾ ನಗುಮುಖ ದೊಂದಿಗೆ ಸ್ಪಂದಿಸುವ ಒಬ್ಬ ಅಜಾತಶತ್ರುವೆಂದು ಬಿಂಬಿತರಾದವರು. ಇವರು ಪ್ರಗತಿಪರ ಕೃಷಿಕರು, ನಾಟಕ ಯಕ್ಷಗಾನ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು.


ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ನಿಧನ ಸುದ್ದಿ ತಿಳಿದು ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಯಾದ ರಕ್ಷಿತ್ ಶಿವರಾಮ್ ಹಾಗೂ ಎಲ್ಲಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು- ಸದಸ್ಯರುಗಳು, ಗಣ್ಯಾದಿ ಗಣ್ಯರುಗಳೊಂದಿಗೆ ಊರಿನ ಜನರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

Leave a Comment

error: Content is protected !!