ಹೆರಾಜೆ ಕುಟುಂಬದ ಮೂಲ ಕ್ಷೇತ್ರ ಮುಗ್ಗ ಗುತ್ತುವಿನಲ್ಲಿ ಸ್ಪಂದನರವರ ಆತ್ಮವನ್ನು ಹಿರಿಯರೊಂದಿಗೆ ಸೇರಿಸುವ ಕಾರ್ಯಕ್ರಮ ನಟ ವಿಜಯರಾಘವೇಂದ್ರ ಕುಟುಂಬಸ್ಥರು ಭಾಗಿ

Suddi Udaya

ಬೆಳ್ತಂಗಡಿ: ತುಳುನಾಡ ಸಂಸ್ಕೃತಿಯಂತೆ ಹೆರಾಜೆ ಕುಟುಂಬದ ಮೂಲ ಕ್ಷೇತ್ರ ಮುಗ್ಗ ಗುತ್ತುವಿನಲ್ಲಿ ಅ.13ರಂದು ಸಾಯಂಕಾಲ ನಟ ವಿಜಯರಾಘವೇಂದ್ರರವರ ಧರ್ಮಪತ್ನಿ ಸ್ಪಂದನ ರವರ ಆತ್ಮವನ್ನು ಹಿರಿಯರೊಂದಿಗೆ ಸೇರಿಸುವ ಕಾರ್ಯಕ್ರಮ ಜರಗಿತು.


ಈ ಕಾರ್ಯಕ್ರಮದಲ್ಲಿ ನಟ ವಿಜಯ ರಾಘವೇಂದ್ರ, ಶೌರ್ಯ ವಿಜಯ ರಾಘವೇಂದ್ರ, ಬಿಕೆ ಶಿವರಾಂ ಕುಟುಂಬಸ್ಥರು ಸುಪ್ರಸಿದ್ಧ ಸಿನೆಮಾ ನಿರ್ಮಾಪಕರಾದ ಸಿ.ಎಸ್.ಎ ಚಿನ್ನೆ ಗೌಡ, ಸ್ಪಂದನ ಅವರ ಸಹೋದರ ರಕ್ಷಿತ್ ಶಿವರಾಂ, ರಾಜು ಪೂಜಾರಿ ಕಾಶಿಪಟ್ನ, ನ್ಯಾಯವಾದಿ ಭಗೀರಥ ಜಿ. ಯೋಗೀಶ್ ಕುಮಾರ್ ನಡಕರ, ಗಂಗಾಧರ ಮಿತ್ತಮಾರು, ಸತೀಶ್ ಬಂಗೇರ ಕಾಶಿಪಟ್ನ, ನಾಗೇಶ್ ಗೌಡ, ಡಾ. ರಾಜಾರಾಮ್, ಸುಭಾಷ್ ರೈ, ರಮೇಶ ಬಂಗೇರ, ಪ್ರವೀಣ್ ಫೆರ್ನಾಂಡಿಸ್, ಜಯವಿಕ್ರಂ ಕಲ್ಲಾಪು, ತುಕಾರಾಮ ಬಂಗೇರ, ಚಂದ್ರಶೇಖರ ಪೂಜಾರಿ, ಜಗನ್ನಾಥ್ ಬಂಗೇರ, ಹೆರಾಜೆ ಕುಟುಂಬದ ಪೀತಾಂಬರ ಹೆರಾಜೆ, ಮಿತ್ರ ಹೆರಾಜೆ ಹಾಗೂ ನೂರಾರು ಕುಟುಂಬಸ್ಥರು ಹಾಗೂ ತಾಲೂಕಿನ ಗಣ್ಯರು ಹಾಜರಿದ್ದರು. ಶೇಖರ ಬಂಗೇರರವರ ನೇತೃತ್ವದಲ್ಲಿ, ಪ್ರಶಾಂತ್ ಕಾಂಡೆತ್ಯಾರು, ದಿನೇಶ್‌ರವರ ಸಹಕಾರದೊಂದಿಗೆ ಪೂಜಾ, ವಿಧಿ-ವಿಧಾನಗಳನ್ನು ನಡೆಸಲಾಯಿತು. ವರುಣದೇವರ ಕೃಪೆಯಿಂದ ಮಳೆಯ ಅವಾಂತರವಿಲ್ಲದೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.

Leave a Comment

error: Content is protected !!