ಬೆಳ್ತಂಗಡಿ ತಾಲೂಕು ಕಬ್ಬಡಿ ಅಸೋಸಿಯೇಷನ್ ತೀರ್ಪುಗಾರರ ಮಂಡಳಿಯ ಪದಾಧಿಕಾರಿಯ ಆಯ್ಕೆ: ಅಧ್ಯಕ್ಷರಾಗಿ ಪ್ರಭಾಕರ್ ನಾರಾವಿ

Suddi Udaya

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಅಮೇಚೂರ್ ಕಬ್ಬಡಿ ಅಸೋಸಿಯೇಷನ್ ಅಧ್ಯಕ್ಷ ರಂಜನ್.ಜಿ. ಗೌಡ ಇವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ತಾಲೂಕು ತೀರ್ಪುಗಾರರ ಮಂಡಳಿ ಸಭೆ ನಡೆಸಿ ಹೊಸದಾಗಿ ತೀರ್ಪುಗಾರ ಪದಾಧಿಕಾರಿಗಳ ಆಯ್ಕೆಯು ಬೆಳ್ತಂಗಡಿ ಸುವರ್ಣ ಆರ್ಕೇಡ್ ನಲ್ಲಿ ಅ.17 ರಂದು ನಡೆಯಿತು.

ತಾಲೂಕು ಅಧ್ಯಕ್ಷರಾದ ಕರ್ನಾಟಕ ರಾಜ್ಯ ತೀರ್ಪುಗಾರ ಮಂಡಳಿಯ ರಾಜ್ಯ ಸಂಚಾಲಕ ಪ್ರಭಾಕರ್ ನಾರಾವಿ ಅವಿರೋಧ ಆಯ್ಕೆಯಾದರು. ಸಂಚಾಲಕರಾಗಿ ಶೀತಲ್ ಪಡಿವಾಳ್ , ಕೋಶಾಧಿಕಾರಿಯಾಗಿ ಧರ್ಮೇಂದ್ರ ಗೌಡರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಪ್ರಭಾಕರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಶೆಟ್ಟಿ, ಕಾರ್ಯಾಧ್ಯಕ್ಷ ಜಿಲ್ಲಾ ಕಬ್ಬಡಿ ಅಸೋಸಿಯೇಷನ್ ಉಪಾಧ್ಯಕ್ಷ ನಾಮದೇವು ಮುಂಡಾಜೆ, ಜಯರಾಜ್ ಜೈನ್, ಜಿಲ್ಲಾಧ್ಯಕ್ಷರಾದ ಕೃಷ್ಣಾನಂದ ರಾವ್ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!