ಯಕ್ಷ ಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದಿಂದ ಡಿ.2 ಯಕ್ಷ ಸಂಭ್ರಮ 2023

Suddi Udaya

ಬೆಳ್ತಂಗಡಿ : ಯಕ್ಷ ದ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ವರ್ಷದ ಕಾರ್ಯಕ್ರಮ ಬಗ್ಗೆ ಅ.20ರಂದು ಲಯನ್ಸ್ ಭವನ ಬೆಳ್ತಂಗಡಿಯಲ್ಲಿ ನಡೆಯಿತು.
ಡಿ.2ರಂದು ಯಕ್ಷಸಂಭ್ರಮ 2023 ಕಾರ್ಯಕ್ರಮವು ಗೌರವಾಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಬರೋಡ ಇವರ ನೇತೃತ್ವದಲ್ಲಿ ಉಜಿರೆ ರಥ ಬೀದಿಯಲ್ಲಿ ನಡೆಯಲಿದ್ದು. ವಿವಿಧ ಗಣ್ಯರ ಉಪಸ್ಥಿತಿಯಲ್ಲಿ. ಸನ್ಮಾನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ರೀತಿಯ ಊಟ ಉಪಚಾರ ಮತ್ತು ತಿಂಡಿ ತಿನಿಸುಗಳು, ವೈಭವ್ ಪೂರ್ಣ ಮೆರವಣಿಗೆ ನಡೆಯಲಿದೆ.


ಈ ಸಂದರ್ಭದಲ್ಲಿ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಸುರೇಶ ಶೆಟ್ಟಿ ,ಮಾರ್ಗದರ್ಶಕರಾದ ಭುಜಬಲಿ, ರಘುರಾಮ್ ಶೆಟ್ಟಿ, ಕಾರ್ಯದರ್ಶಿ ಶಿತಿಕಂಠ ಭಟ್, ಉಮೇಶ ಶೆಟ್ಟಿ, ಜಯಂತ್ ಶೆಟ್ಟಿ, ವಸಂತ ಶೆಟ್ಟಿ, ದೀಪಕ್, ಜನಾರ್ಧನ್ ಶೆಟ್ಟಿ, ವೆಂಕಟರಮಣ ಶೆಟ್ಟಿ, ಕೃಷ್ಣ ಐತಲ್, ತುಕಾರಾಮ ಮಂಜುನಾಥ್ ಶೆಟ್ಟಿ, ನಾರಾಯಣ್, ಶಂಕರ್ ರಾವ್ ಉಪಸ್ಥಿತರಿದ್ದರು.

Leave a Comment

error: Content is protected !!