ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿಯಲ್ಲಿ ನೂತನವಾಗಿ ಪ್ರಾರಂಭಿಸಿದ ಡ್ರೀಮ್ ಡೀಲ್ ಗ್ರೂಪ್ಸ್ ಉದ್ಘಾಟನೆ

ಬೆಳ್ತಂಗಡಿ: ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಡ್ರೀಮ್ ಡೀಲ್ ಗ್ರೂಪ್ ನ ಬೆಳ್ತಂಗಡಿ ಬ್ರಾಂಚ್ ನ ಉದ್ಘಾಟನೆಯು ನಗರ ಪಂಚಾಯತ್ ಬಿಲ್ಡಿಂಗ್ ಸಂತೆಕಟ್ಟೆ ಬೆಳ್ತಂಗಡಿಯಲ್ಲಿ ನಡೆಯಿತು.

ನೂತನ ಡಿಡಿ ಗ್ರೂಪ್ ನ್ನು ಬೆಳ್ತಂಗಡಿ ಚರ್ಚ್ ನ ಧರ್ಮಗುರುಗಳಾದ ರೇ.ಫಾ| ಕ್ಲಿಪರ್ಡ್ ಸೈಮನ್ ಪಿಂಟೋ ಉದ್ಘಾಟಿಸಿ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಖಿಲರ್ ಜುಮ್ಮಾ ಮಸೀದಿ ಅಧ್ಯಕ್ಷ ಬಿ.ಎ ನಝೀರ್, ನ್ಯಾಯವಾದಿ ಶಶಿಕಿರಣ್ ಜೈನ್ ಬೆಳ್ತಂಗಡಿ, ಡಿಡಿ ಗ್ರೂಪ್ಸ್ ಆಡಳಿತ ನಿರ್ದೇಶಕ ಸುಹೇಲ್, ಮೊಬೈಲ್ ಪ್ಯಾಲೇಸ್ ಮಾಲಕ ಉಮೇಶ್ ಪೂಜಾರಿ ಉಪಸ್ಥಿತರಿದ್ದು ಶುಭಕೋರಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಇಮ್ತಿಯಾಜ್ ಬೆಳ್ತಂಗಡಿ, ಸುಹೇಲ್ ಸಮಕ್ ಡೈನ್ ಬೆಳ್ತಂಗಡಿ, ಕಿಶಾನ್ ಭಟ್ ಕಟೀಲು,ಬದ್ರುದ್ದೀನ್ ಶಾಜ್ ಕಲೆಕ್ಷನ್ ಬೆಳ್ತಂಗಡಿ,ನಿತೇಶ್ ಎಸ್.ವಿ ಮೊಬೈಲ್ ಬೆಳ್ತಂಗಡಿ, ನಿಜಾಮ್ ರೋಯಲ್ ಝೋನ್ ಬೆಳ್ತಂಗಡಿ, ಪುತ್ತ ಬೆಳ್ತಂಗಡಿ ಹಾಗೂ ಇತರರು ಉಪಸ್ಥಿತರಿದ್ದು ಶುಭಕೋರಿದರು.

ರಾಯಲ್ ಝೋನ್ ಮಾಲಕ, ನಿರೂಪಕ ಮಹಮ್ಮದ್ ನಿಸಾರ್ ಸ್ವಾಗತಿಸಿ, ವಂದಿಸಿದರು. ಸಂಸ್ಥೆಯ ಪಾಲುದಾರರು ಅತಿಥಿ ಗಣ್ಯರನ್ನು ಸತ್ಕರಿಸಿದರು.

ಡಿಡಿ ಗ್ರೂಪ್ಸ್ ಸಂಸ್ಥೆಯು ಲಕ್ಕಿ ಸ್ಕೀಮ್ ನ್ನು ಮಾಡುತ್ತಿದ್ದು ರಾಜ್ಯಾದ್ಯಂತ ಹಲವಾರು ಶಾಖೆಗಳನ್ನು ತೆರದಿದ್ದಾರೆ. ತಿಂಗಳಿಗೆ ಒಂದು ಸಾವಿರದಂತೆ 20 ಕಂತು ಪಾವತಿಸಲು ಅವಕಾಶವಿದೆ. ಲಕ್ಕಿ ಡ್ರಾದಲ್ಲಿ ವಿಜೇತರಿಗೆ ಕಾರು, ದ್ವಿಚಕ್ರ ವಾಹನ, ಬಂಗಾರ, ಎಲೆಕ್ಟ್ರಾನಿಕ್ ಮುಂತಾದ ವಸ್ತುಗಳು ಸಿಗುತ್ತದೆ. ಕಂತು ಪಾವತಿಸಿ ಯಾವುದೇ ಬಹುಮಾನ ಬಾರದಿದ್ದರು ಕಟ್ಟಿದ ಮೊತ್ತದ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದಾಗಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕರು ತಿಳಿಸಿದರು.

Related posts

ಡ್ರಾಯಿಂಗ್ ಗ್ರೇಡ್ ಪರೀಕ್ಷೆ: ಎಕ್ಸೆಲ್ ಟೆಕ್ನೊ ಸ್ಕೂಲ್ ವೇಣೂರಿಗೆ ಶೇ.100 ಫಲಿತಾಂಶ:ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಬಿ

Suddi Udaya

ಗುರುವಾಯನಕೆರೆ: ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ ವಾರ್ಷಿಕ ಮಹಾಸಭೆ

Suddi Udaya

ಧರ್ಮಸ್ಥಳ ಕ್ಷೇತ್ರ ಹಾಗೂ ಡಾ.ಡಿ. ಹೆಗ್ಗಡೆಯವರ ಜತೆ ನಾವು ನಿಲ್ಲುತ್ತೇವೆ: ಮಾಜಿ ಸಚಿವ ಜನಾರ್ದನ ಪೂಜಾರಿ

Suddi Udaya

ಉಜಿರೆ: ಯುವಕ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್‌ನಿಂದ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!