ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಮುಖ್ಯಕಾರ್ಯನಿರ್ವಹರ್ಣಾಧಿಕಾರಿಯಾಗಿ ಕೆ.ವಿ ಶ್ರೀನಿವಾಸ್ ಅಧಿಕಾರ ಸ್ವೀಕಾರ

Suddi Udaya

ಕೊಕ್ಕಡ : ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಕಾರ್ಯನಿರ್ವಹರ್ಣಾಧಿಕಾರಿಯಾಗಿದ್ದ ದಯಾನಂದ ಹೆಗ್ಡೆಯವರು ನೂತನವಾಗಿ ಕಾರ್ಯನಿರ್ವಹರ್ಣಾಧಿಕಾರಿಗಳು ನಿಯೋಜನೆಗೊಂಡ ಕೆ.ವಿ ಶ್ರೀನಿವಾಸ್ ರವರಿಗೆ ಅಧಿಕಾರಿ ಹಸ್ತಾಂತರ ಕಾರ್ಯಕ್ರಮ ನ.3 ರಂದು ಜರಗಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್, ಸದಸ್ಯರಾದ ಪ್ರಶಾಂತ್ ಪೂವಾಜೆ, ಪುರಂದರ ಗೌಡ ಕೆ, ವಿಠಲ ಕುರ್ಲೆ ನವೀನ್ ಕಜೆ, ಹೇಮಾವತಿ ಶಿವಾನಂದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಧಾರ್ಮಿಕ ದತ್ತಿ ಇಲಾಖೆಯು ಶ್ರೀ ಕ್ಷೇತ್ರದ ಹೆಸರಿಗೆ ಮಂಜೂರುಗೊಳಿಸಿದ್ದ ಜಮೀನಿನ ಪತ್ರ ಹಸ್ತಾಂತರ ಕಾರ್ಯಕ್ರಮ ನ.3 ರಂದು ನಿಗದಿಗೊಂಡಿದ್ದರು ಕಂದಾಯ ಇಲಾಖೆಯ ಅಧಿಕಾರಿಗಳು ಬಾರದೇ ಇದ್ದುದರಿಂದ ಈ ಕಾರ್ಯಕ್ರಮ ರದ್ದಾಗಿದೆ.

Leave a Comment

error: Content is protected !!