23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ : ಆಭರಣ ಜ್ಯುವೆಲರಿಗೆ ಐಟಿ ದಾಳಿ ಪ್ರಕರಣ: ಬೆಳ್ತಂಗಡಿ ಆಭರಣ ಶಾಪ್ ನ ಐಟಿ ದಾಳಿ ಮುಕ್ತಾಯ

ಬೆಳ್ತಂಗಡಿ : ಕರ್ನಾಟಕದಲ್ಲಿರುವ ಎಲ್ಲಾ ಆಭರಣ ಜ್ಯುವೆಲರಿ ಮಳಿಗೆ ಸಂಸ್ಥೆ ಮೇಲೆ ಅ.31 ರಿಂದ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆಯಲ್ಲಿ ತೊಡಗಿದ್ದರು. ಬೆಳ್ತಂಗಡಿಯ ಆಭರಣ ಜ್ಯುವೆಲರಿ ಶಾಪ್ ನಲ್ಲಿ ಸತತ ನಾಲ್ಕು ದಿನಗಳ ಕಾರ್ಯಾಚರಣೆ ನಡೆಸಿ ನ.4 ಬೆಳಗ್ಗಿನ ಜಾವ 2:30 ಕ್ಕೆ ಬೆಂಗಳೂರು ಐಟಿ ಕಚೇರಿಗೆ ಅಧಿಕಾರಿಗಳು ವಾಪಸ್ ಹೋಗಿದ್ದಾರೆ.

ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿರುವ ಭರಣಿ ಕಟ್ಟಡದಲ್ಲಿರುವ ಆಭರಣ ಚಿನ್ನದ ಮಳಿಗೆ ಮೇಲೆ ಎರಡು ಇನೋವಾ ಕಾರಿನಲ್ಲಿ ಬೆಂಗಳೂರು ಐಟಿ ಕಚೇರಿಯಿಂದ ಬಂದ ಚೈನೈ , ಆಂದ್ರಪ್ರದೇಶ, ತಮಿಳುನಾಡು, ಕೊಚ್ಚಿ ಸೇರಿದಂತೆ ಒಂಭತ್ತು ಜನ ಅಧಿಕಾರಿಗಳು ಅ.31 ರಂದು ಬೆಳಗ್ಗೆ 6 ಗಂಟೆಯಿಂದ ನ.3 ರ ರಾತ್ರಿವರೆಗೆ ಒಟ್ಟು ನಾಲ್ಕು ದಿನ ದಾಳಿ ಮಾಡಿ ಚಿನ್ನಾಭರಣ ಹಾಗೂ ದಾಖಲೆ ಪರಿಶೀಲನೆ ನಡೆಸಿದ್ದರು. ನಾಲ್ಕು ದಿನಗಳಿಂದ ಐಟಿ ದಾಳಿಯಿಂದ ಆಭರಣ ಜ್ಯುವೆಲರಿ ಶಾಪ್ ಬಂದ್ ಮಾಡಿ ಗ್ರಾಹಕರಿಗೆ ಪ್ರವೇಶ ನಿಷೇಧ ಮಾಡಲಾಗಿತ್ತು.

ಉಡುಪಿಯ ಆಭರಣ ಶಾಪ್ ಗಳಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ರಮವಾಗಿ ಶೇಖರಿಸಿಟ್ಟ ಚಿನ್ನದ ಗಟ್ಟಿಯನ್ನು ಐಟಿ ಅಧಿಕಾರಿಗಳಿಗೆ ಪತ್ತೆಯಾಗಿದ್ದು. ಅಲ್ಲಿಯ ದಾಳಿ ಐದನೇ ದಿನಕ್ಕೆ ಮುಂದುವರಿದಿದೆ ಎಂದು ಐಟಿ ಮೂಲಗಳು ತಿಳಿಸಿದ್ದಾರೆ.

Related posts

ಆಟಿಡೊಂಜಿ ಕೆಸರ್ದ ಗೊಬ್ಬು ವತಿಯಿಂದ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್‌ರಿಗೆ ಗೌರವಾರ್ಪಣೆ

Suddi Udaya

ವಿದ್ವತ್ ಜೆಇಇ ಸಾಧಕರಿಗೆ ಕಾಲೇಜು ವತಿಯಿಂದ ಅಭಿನಂದನೆ: 35 ವಿದ್ಯಾರ್ಥಿಗಳ ಪೈಕಿ 21 ಮಂದಿ ಶೇ.90 ಅಧಿಕ ಪರ್ಸೆಂಟೈಲ್ ಪಡೆದ ದಾಖಲೆ

Suddi Udaya

ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ನಿಡ್ಲೆ ಕೃಷ್ಣಪ್ಪ ಎಂ. ಕೆ ಅವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ, ವೈಯಕ್ತಿಕ ಧನಸಹಾಯ

Suddi Udaya

ಬೆಳ್ತಂಗಡಿ ನ್ಯಾಯಾಲಯದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಶಶಿಧರ ಎಂ ಗೌಡ ರವರಿಗೆ ಸ್ವಾಗತ ಸಮಾರಂಭ

Suddi Udaya

ಗುರುವಾಯನಕೆರೆ ವಲಯದ ಪವಿತ್ರ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ದಿನ ಕಾರ್ಯಕ್ರಮ

Suddi Udaya

ಕರ್ನಾಟಕ ರಾಜ್ಯ ಮಟ್ಟದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಬಂದಾರುವಿನ ತೇಜಸ್ವಿನಿ ಪೂಜಾರಿ ರವರಿಗೆ ಎರಡು ಚಿನ್ನದ ಪದಕ

Suddi Udaya
error: Content is protected !!