ಶಿಶಿಲ ಶ್ರೀ ಕ್ಷೇತ್ರ ಚಂದ್ರಪುರಕ್ಕೆ ಭಟ್ಟಾರಕರ ಸ್ವಾಮೀಜಿ ಭೇಟಿ

Suddi Udaya

ಶಿಶಿಲ: ಪರಮಪೂಜ್ಯ ಶ್ರೀ ಸೌರಭ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ತಿಜಾರ ರಾಜಸ್ಥಾನದ ಪೂಜ್ಯ ಭಟ್ಟಾರಕರು ನ.4 ರಂದು ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಜಿನಮಂದಿರಕ್ಕೆ ಆಗಮಿಸಿ ಭಗವಾನ್ ಶ್ರೀ 1008 ಚಂದ್ರನಾಥ ಸ್ವಾಮಿಯ ಹಾಗೂ ಮಹಾಮಾತೆ ಪದ್ಮಾವತಿ ಅಮ್ಮನವರ ದರ್ಶನ ಮಾಡಿದರು.

ನಂತರ ಪೂಜ್ಯರ ಪಾದಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಆಡಳಿತ ಮoಡಳಿಯ ಎಲ್ಲಾ ಸದಸ್ಯರು ಪೂಜ್ಯರನ್ನು ಸ್ವಾಗತಿಸಿ ಜಿನ ಮಂದಿರಕ್ಕೆ ಬರಮಾಡಿಕೊಂಡರು, ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು.

Leave a Comment

error: Content is protected !!