ನಗರ ಪಂಚಾಯತದ ಒಳಚರಂಡಿಗೆ ಬಿದ್ದ ದನ: ಅಗ್ನಿಶಾಮಕದವರ ಸಹಕಾರದಿಂದ ಮೇಲಕ್ಕೆ

Suddi Udaya

ಬೆಳ್ತಂಗಡಿ: ಇಲ್ಲಿಯ ಕೃಷಿ ಇಲಾಖೆಯ ಬಳಿಯಲ್ಲಿ ನಗರ ಪಂಚಾಯತಕ್ಕೆ ಸೇರಿದ ಒಳಚರಂಡಿಗೆ ದನವೊಂದು ಬಿದ್ದು ಮೇಲೆ ಹತ್ತಲಾಗದೆ ಒದ್ದಾಡಿದ ಘಟನೆ ಇಂದು ನಡೆದಿದ್ದು, ನಂತರ ಬೆಳ್ತಂಗಡಿ ಅಗ್ನಿಶಾಮದ ದಳವದವರ ಸಹಕಾರದಿಂದ ದನವನ್ನು ಮೇಲೆತ್ತಲಾಯಿತು.


ಬೆಳ್ತಂಗಡಿ ನಗರದ ಒಳಗಚರಂಡಿ ಕೃಷಿ ಇಲಾಖೆ ಬಳಿಯಿಂದ ಹಾದುಹೋಗಿದ್ದು, ಒಳಚರಂಡಿಯ ಮೇಲ್ಗಡೆ ಸ್ಲೇಫ್ ಹಾಕದೆ ಹಲವು ವರ್ಷಗಳು ಕಳೆದಿದೆ. ಒಳಚರಂಡಿ ಓಪನ್ ಆಗಿದ್ದು, ಇಂದು ಬೆಳಿಗ್ಗೆ ಬೀಡಾಡಿ ದನವೊಂದು ಮೇಯುತ್ತಾ ಬಂದು ಒಳಚರಂಡಿಗೆ ಆಕಸ್ಮಿಕವಾಗಿ ಬಿದ್ದಿತ್ತು. ಮೇಲೆ ಹತ್ತಲಾಗದೆ ಒದ್ದಾಡುತ್ತಿದ್ದ ದನವನ್ನು ಕಂಡು ಸ್ಥಳೀಯರು ಕೃಷಿ ಇಲಾಖೆಯವರ ಹಾಗೂ ನಗರ ಪಂಚಾಯತದ ಗಮನಕ್ಕೆ ತಂದಿದ್ದರು. ಬಳಿಕ ಬೆಳ್ತಂಗಡಿ ಅಗ್ನಿಶಾಮಕದವರಿಗೆ ಮಾಹಿತಿ ನೀಡಿ, ಅವರು ಸ್ಥಳಕ್ಕೆ ಆಗಮಿಸಿ, ಜೆಸಿಬಿ ಮೂಲಕ ಒಳಚರಂಡಿಯಲ್ಲಿ ಸಿಲುಕಿಕೊಂಡಿದ್ದ ದನವನ್ನು ಮೇಲೆತ್ತಲಾಯಿತು. ಇಲ್ಲಿ ಈಗಾಗಲೇ ಮೂರ‍್ನಾಲ್ಕು ಇಂತಹ ಘಟನೆಗಳು ಈಗಾಗಲೇ ನಡೆದಿದೆ. ಕೃಷಿ ಇಲಾಖೆಯ ಅಧಿಕಾರಿಗಳು ನ.ಪಂ ಸದಸ್ಯ ಜಗದೀಶ್, ನ.ಪಂ ಕರುಣಾಕರ್ ಮತ್ತಿತರರು ಉಪಸ್ಥಿತರಿದ್ದರು. ಒಳಚರಂಡಿಗೆ ಮೇಲ್ಗಡೆ ಸ್ಲಾಬ್ ಹಾಕಲು 15ನೇ ಹಣಕಾಸು ಯೋಜನೆಯಲ್ಲಿ ಅನುದಾನ ಇಡಲಾಗಿದ್ದು, ಟೆಂಡರ್ ಹಂತದಲ್ಲಿದೆ. ಇದರ ಕಾಮಗಾರಿ ಶೀಘ್ರವಾಗಿ ನಡೆಯಲಿದೆ ಎಂದು ಜಗದೀಶ್ ಡಿ. ತಿಳಿಸಿದ್ದಾರೆ.

Leave a Comment

error: Content is protected !!