25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ನಗರ ಪಂಚಾಯತದ ಒಳಚರಂಡಿಗೆ ಬಿದ್ದ ದನ: ಅಗ್ನಿಶಾಮಕದವರ ಸಹಕಾರದಿಂದ ಮೇಲಕ್ಕೆ

ಬೆಳ್ತಂಗಡಿ: ಇಲ್ಲಿಯ ಕೃಷಿ ಇಲಾಖೆಯ ಬಳಿಯಲ್ಲಿ ನಗರ ಪಂಚಾಯತಕ್ಕೆ ಸೇರಿದ ಒಳಚರಂಡಿಗೆ ದನವೊಂದು ಬಿದ್ದು ಮೇಲೆ ಹತ್ತಲಾಗದೆ ಒದ್ದಾಡಿದ ಘಟನೆ ಇಂದು ನಡೆದಿದ್ದು, ನಂತರ ಬೆಳ್ತಂಗಡಿ ಅಗ್ನಿಶಾಮದ ದಳವದವರ ಸಹಕಾರದಿಂದ ದನವನ್ನು ಮೇಲೆತ್ತಲಾಯಿತು.


ಬೆಳ್ತಂಗಡಿ ನಗರದ ಒಳಗಚರಂಡಿ ಕೃಷಿ ಇಲಾಖೆ ಬಳಿಯಿಂದ ಹಾದುಹೋಗಿದ್ದು, ಒಳಚರಂಡಿಯ ಮೇಲ್ಗಡೆ ಸ್ಲೇಫ್ ಹಾಕದೆ ಹಲವು ವರ್ಷಗಳು ಕಳೆದಿದೆ. ಒಳಚರಂಡಿ ಓಪನ್ ಆಗಿದ್ದು, ಇಂದು ಬೆಳಿಗ್ಗೆ ಬೀಡಾಡಿ ದನವೊಂದು ಮೇಯುತ್ತಾ ಬಂದು ಒಳಚರಂಡಿಗೆ ಆಕಸ್ಮಿಕವಾಗಿ ಬಿದ್ದಿತ್ತು. ಮೇಲೆ ಹತ್ತಲಾಗದೆ ಒದ್ದಾಡುತ್ತಿದ್ದ ದನವನ್ನು ಕಂಡು ಸ್ಥಳೀಯರು ಕೃಷಿ ಇಲಾಖೆಯವರ ಹಾಗೂ ನಗರ ಪಂಚಾಯತದ ಗಮನಕ್ಕೆ ತಂದಿದ್ದರು. ಬಳಿಕ ಬೆಳ್ತಂಗಡಿ ಅಗ್ನಿಶಾಮಕದವರಿಗೆ ಮಾಹಿತಿ ನೀಡಿ, ಅವರು ಸ್ಥಳಕ್ಕೆ ಆಗಮಿಸಿ, ಜೆಸಿಬಿ ಮೂಲಕ ಒಳಚರಂಡಿಯಲ್ಲಿ ಸಿಲುಕಿಕೊಂಡಿದ್ದ ದನವನ್ನು ಮೇಲೆತ್ತಲಾಯಿತು. ಇಲ್ಲಿ ಈಗಾಗಲೇ ಮೂರ‍್ನಾಲ್ಕು ಇಂತಹ ಘಟನೆಗಳು ಈಗಾಗಲೇ ನಡೆದಿದೆ. ಕೃಷಿ ಇಲಾಖೆಯ ಅಧಿಕಾರಿಗಳು ನ.ಪಂ ಸದಸ್ಯ ಜಗದೀಶ್, ನ.ಪಂ ಕರುಣಾಕರ್ ಮತ್ತಿತರರು ಉಪಸ್ಥಿತರಿದ್ದರು. ಒಳಚರಂಡಿಗೆ ಮೇಲ್ಗಡೆ ಸ್ಲಾಬ್ ಹಾಕಲು 15ನೇ ಹಣಕಾಸು ಯೋಜನೆಯಲ್ಲಿ ಅನುದಾನ ಇಡಲಾಗಿದ್ದು, ಟೆಂಡರ್ ಹಂತದಲ್ಲಿದೆ. ಇದರ ಕಾಮಗಾರಿ ಶೀಘ್ರವಾಗಿ ನಡೆಯಲಿದೆ ಎಂದು ಜಗದೀಶ್ ಡಿ. ತಿಳಿಸಿದ್ದಾರೆ.

Related posts

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಹಕಾರಿ ಕ್ಷೇತ್ರದ ಧುರೀಣ, ಹಿರಿಯರಾದ ಹೆಚ್.ಧರ್ಣಪ್ಪ ಪೂಜಾರಿಯವರಿಗೆ ಸನ್ಮಾನ

Suddi Udaya

ಎಸ್ ಕೆ ಎಸ್ ಎಸ್ ಎಫ್ ಕಕ್ಕಿಂಜೆ ಶಾಖೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ: ಮಾದಕ ವ್ಯಸನ ಮುಕ್ತ ಪ್ರತಿಜ್ಞಾ ವಿಧಿ ಸ್ವೀಕಾರ

Suddi Udaya

ಉಜಿರೆ ಶ್ರೀ. ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಭಾ ಪುರಸ್ಕಾರ

Suddi Udaya

ಅಂತರ್ ಕಾಲೇಜು ಮಟ್ಟದ ಸ್ಪರ್ಧೆ: ವಿದ್ವತ್ ಪಿ.ಯು ಕಾಲೇಜಿನ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya

ಎ.20: ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ: 10 ಸಾವಿರ ಕಾರ್ಯಕರ್ತರು ಭಾಗಿ

Suddi Udaya

ಆಮಂತ್ರಣ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿ ಶಿವಪ್ರಸಾದ್ ಅಜಿಲ

Suddi Udaya
error: Content is protected !!