28 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸೈಕಲ್ ಯಾತ್ರೆ ಕೈಗೊಂಡ ರಾಜಾಜಿನಗರದ ಶಾಸಕ ಸುರೇಶ ಕುಮಾರ್

ಬೆಳ್ತಂಗಡಿ: ಬೆಂಗಳೂರಿನಿಂದ ಶ್ರೀ  ಕ್ಷೇತ್ರ ಧರ್ಮಸ್ಥಳಕ್ಕೆ  ಮಾಜಿ ಸಚಿವ ಹಾಗು ರಾಜಾಜಿನಗರದ ಶಾಸಕ ಸುರೇಶ ಕುಮಾರ್ ಅವರು  ಸೈಕಲ್ ಯಾತ್ರೆ ಕೈಗೊಂಡು  ಧರ್ಮಸ್ಥಳದಲ್ಲಿ  ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.  ಬುಧವಾರ (ನ. 8)ಮುಂಜಾನೆ ಬೆಂಗಳೂರಿನಿಂದ ಹೊರಟ ಅವರು ನ.1೦ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಿ ತನ್ನ ಸೈಕಲ್ ಯಾತ್ರೆಯನ್ನು ಸಮಾಪ್ತಿಗೊಳಿಸಿದ್ದಾರೆ. 

ದಿ ರಾಜಾಜಿನಗರ ಪೆಡಲ್ ಪವರ್ ತಂಡದ ಮೂಲಕ ಎಂಟು ಜನ ಸಹಸವಾರರ ಜತೆಗೆ ಮೂರು ದಿನಗಳ  ಸೈಕಲ್ ಯಾತ್ರೆಯನ್ನು  ಯಶಸ್ವಿಯಾಗಿ ಪೂರೈಸಿದ ಶಾಸಕ ಸುರೇಶ ಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಿ ಶ್ರೀ ಸ್ವಾಮಿಯ ಸೇವೆ ಗೈದಿದ್ದಾರೆ. ಸುರೇಶ ಕುಮಾರ್ ಜತೆಗೆ ಅಯ್ಯಪ್ಪ, ಸಾಗರ್ ನಾಯ್ಡು, ಹರೀಶ್, ರಾಘವ್,ದಿವಾಕರ್, ಮೋಹನ್, ಬಾಲು  ಮತ್ತು ಕಿರಣ್ ಸಹಸವಾರರಾಗಿ ಪಾಲ್ಗೊಂಡಿದ್ದರು. 2014ರ ನವೆಂಬರ್ ನಲ್ಲಿ  ಶಾಸಕ ಸುರೇಶ್ ಕುಮಾರ್ ಎಂಟು ದಿನಗಳ  ಕಾಲ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯುತ್ರೆ  ಮೂಲಕ  ಸಾಗಿ ಬಂದಿದ್ದರು.

Related posts

ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಗೌರವ

Suddi Udaya

ನ.3: ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ “ಬಂಟೆರೆ ತುಡರ್ ಪರ್ಬ”

Suddi Udaya

ಸವಣಾಲು: ಗುತ್ತಿನಬೈಲು ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡನಾಟಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿಯ ಹಲವು ಕಡೆ ಆಲಿಕಲ್ಲು ಮಳೆ

Suddi Udaya

ಧರ್ಮಸ್ಥಳ: ಭಕ್ತಿಯ ನಡಿಗೆಯಲ್ಲಿ ಭಕ್ತರ ಮನಸೆಳೆದ ಆನೆ- ದೊಡ್ಡ ಗಾತ್ರದ ಶಿವನ ಮೂರ್ತಿ: ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉದ್ಯಮಿ ಮೋಹನ್ ಕುಮಾರ್ ರವರ ಸೇವೆಗೆ ಮೆಚ್ಚುಗೆ

Suddi Udaya

ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!